Advertisement

ಕ್ಯಾನ್ಸರ್‌ ವಿರುದ್ಧ ಕೇಶದಾನ ಅಭಿಯಾನ ಕಾಯ್ದೆ: ಮಾಹಿತಿ ಕಾರ್ಯಾಗಾರ

04:51 PM Oct 15, 2021 | Team Udayavani |

ಮೂಡುಬಿದಿರೆ, ಸ್ಪರ್ಶಯೋಜನೆ-ಕೇಶದಾನ ಇವುಗಳ ಆಶ್ರಯದಲ್ಲಿ ಕ್ಯಾನ್ಸರ್‌ ವಿರುದ್ಧ ಕೇಶದಾನ ಅಭಿಯಾನ ಹಾಗೂ ಅಸ್ತಿತ್ವದಲ್ಲಿರುವ ಕಾಯ್ದೆ ಕುರಿತು ವೂಹಿತಿ ಕಾರ್ಯಾಗಾರ ಅಲಂಗಾರು ಸಂತ ಥೋಮಸ್‌ ಶಾಲೆಯ ಸಭಾಂಗಣದಲ್ಲಿ ಬುಧವಾರ ಜರಗಿತು.

Advertisement

ಹೋಲಿ ರೋಜರಿ ಚರ್ಚ್‌ನ ಉಪಾಧ್ಯಕ್ಷ ರಾಜೇಶ್‌ ಡಿ’ಸೋಜಾ ಕಾರ್ಯಕ್ರಮ ಉದ್ಘಾಟಿಸಿ, ಕಾನೂನು ಕಾಯ್ದೆಗಳನ್ನು ಉಪ ಯೋಗಿಸಿ ಮಹಿಳೆಯರ -ಪುರುಷರ ಸುರಕ್ಷೆ ಕಾಪಾಡಲು ಉತ್ತಮ ಅವಕಾಶ ಗಳು ಇವೆ ಎಂದು ಪ್ರಶಂಸಿಸಿದರು. ಮೂಡುಬಿದಿರೆ ಚರ್ಚ್‌ ವಲಯದ ಅಧ್ಯಕ್ಷ ಮನೋಹರ್‌ ಕುಟಿನ್ಹೋ ಸಭಾಧ್ಯಕ್ಷತೆ ವಹಿಸಿ, ಸಮಾಜದ ಏಳಿಗೆಗೆ ಜಾಗೃತಿ ಕಾರ್ಯಕ್ರಮಗಳು ಹಾಗೂ ದಾನ ಕಾರ್ಯಕ್ರಮಗಳು ಅಗತ್ಯನಿಸಿದೆ ಎಂದು ಹೇಳಿ ಕೇಶದಾನಿಗಳನ್ನು ಅಭಿನಂದಿಸಿದರು.

ಸಿಒಡಿಪಿ ಸಂಯೋಜಕಿ ಲೀಡಿಯಾ ಅವರು ಅಸ್ತಿತ್ವದಲ್ಲಿರುವ ಕಾಯ್ದೆ ಕುರಿತು, ಶಿಲ್ಪಾ ಅವರು ಕೇಶದಾನ ಕ್ಯಾನ್ಸರ್‌ ರೋಗಿಗಳಿಗೆ ದಾನ ವೂಡುವ ಕುರಿತು ಸವಿವರ ವೂಹಿತಿ ನೀಡಿದರು. ಸ್ತ್ರೀಸಂಘಟನೆ ಅಧ್ಯಕ್ಷೆ ಶೋಭಾ ಸಿಕ್ವೇರ, ಪ್ರಗತಿ ಮಹಾಸಂಘದ ಅಧ್ಯಕ್ಷೆ ಮಾರ್ಗರೆಟ್‌ ಮಸ್ಕರೇನ್ಹಸ್‌, ಸಿಒಡಿಪಿ ಸಹೋದ್ಯೋಗಿ ಲವೀನಾ ಉಪಸ್ಥಿತರಿದ್ದರ. ಸಚೇತಕ ಆ್ಯಂಟನಿ ಸ್ವಾಗತಿಸಿ, ರೀಟಾ ವಂದಿಸಿದರು. ಮೇಬಲ್‌ ಲೋಬೋ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next