Advertisement

ತೇಜ್‌ ಬಹಾದ್ದೂರ್‌ ನಾಮಪತ್ರ ರದ್ದು, ನಾಳೆಯೊಳಗೆ ಕಾರಣ ತಿಳಿಸಿ : ಚು.ಆಯೋಗಕ್ಕೆ ಸುಪ್ರೀಂ

09:47 AM May 09, 2019 | Team Udayavani |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುತ್ತಿರುವ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಉಚ್ಚಾಟಿತ ಬಿಎಸ್‌ಎಫ್ ಜವಾನ ತೇಜ್‌ ಬಹಾದ್ದೂರ್‌ ಯಾದವ್‌ ಅವರ ನಾಮಪತ್ರವನ್ನು ರದ್ದು ಮಾಡಿರುವುದರ ಕಾರಣವನ್ನು ನಾಳೆ ಗುರುವಾರದೊಳಗೆ ತನಗೆ ತಿಳಿಸುವಂತೆ ಸರ್ವೋಚ್ಚ ನ್ಯಾಯಾಲಯ ಚುನಾವಣಾ ಆಯೋಗಕ್ಕೆ ಆದೇಶಿಸಿದೆ.

Advertisement

ವಾರಾಣಸಿ ಕ್ಷೇತ್ರದಿಂದ ಎಸ್‌ ಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ತನ್ನ ನಾಮಪತ್ರವನ್ನು ಚುನಾವಣಾ ಆಯೋಗ ರದ್ದು ಮಾಡಿರುವುದನ್ನು ಪ್ರಶ್ನಿಸಿ ತೇಜ್‌ ಬಹಾದ್ದೂರ್‌ ಎರಡು ದಿನಗಳ ಹಿಂದೆ ಸುಪ್ರೀಂ ಕೋರ್ಟ್‌ ಮೆಟ್ಟಲೇರಿದ್ದರು.

ಸೇನೆಯಲ್ಲಿ ಜವಾನರಿಗೆ ಕಳಪೆ ಆಹಾರ ಪೂರೈಸಿ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿ ತಾನೇ ಸಿದ್ಧ ಪಡಿಸಿದ್ದ ವಿಡಿಯೋ ಚಿತ್ರಿಕೆಯನ್ನು ಸಾಮಾಜಿಕ ಮಾಧ್ಯಮಗಳಿಗೆ ಅಪ್‌ಲೋಡ್‌ ಮಾಡಿ, ರಾತ್ರಿ ಬೆಳಗಾಗುವುದರೊಳಗೆ ಅದು ವೈರಲ್‌ ಆಗುವ ಮೂಲಕ ದೇಶಾದ್ಯಂತ ಸುದ್ದಿ ಮಾಡಿದ್ದ ತೇಜ್‌ ಬಹಾದ್ದೂರ್‌ ಯಾದವ್‌ ಅವರನ್ನು ಸೇನೆಯು ಶಿಸ್ತು ಕ್ರಮವಾಗಿ ಅಮಾನತು ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next