Advertisement

ಕೆನರಾ ಬ್ಯಾಂಕ್‌ ಮಾರ್ಕೆಟಿಂಗ್‌ ಮೇಳ

04:18 PM Dec 16, 2017 | |

ಬೆಂಗಳೂರು: ನಗರದ ಬನಶಂಕರಿಯ ಸುವರ್ಣ ಸಂಕ್ರಾಂತಿ ಹಾಲ್‌ನಲ್ಲಿ ಮಹಿಳಾ ಸಬಲೀಕರಣ ಇಲಾಖೆ, ಕೆನರಾ ರಿಲೀಫ್‌ ಆ್ಯಂಡ್‌ ವೆಲ್‌ಫೇರ್‌ ಸೊಸೈಟಿ ಹಾಗೂ ಮಾತೃಛಾಯಾ ಸಹಯೋಗದಲ್ಲಿ ಮಹಿಳಾ ಉದ್ಯಮಿಗಳಿಂದ ಮಾರ್ಕೆಟಿಂಗ್‌ ಮೇಳ “ಕೆನರಾ ಉತ್ಸವ’ವನ್ನು ಆಯೋಜಿಸಲಾಗಿದೆ. ಈ ಐದು ದಿನಗಳ ಮೇಳವನ್ನು ಕೆನರಾ ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೇಶಕ ಎಂ.ವಿ.ರಾವ್‌ ಅವರ ಪತ್ನಿ ಎಂ.ಸುಶೀಲಾ ಅವರು ಉದ್ಘಾಟಿಸಿದರು.

Advertisement

ನಂತರ ಕರಕುಶಲ ವಸ್ತುಗಳ ಪ್ರದರ್ಶನ-ಮಾರಾಟವನ್ನು ವೀಕ್ಷಿಸಿದ ಸುಶೀಲಾ ಅವರು ಬ್ಯಾಂಕು ಮಹಿಳಾ ಕುಶಲಕರ್ಮಿಗಳಿಗೆ ಒದಗಿಸುವ ಆರ್ಥಿಕ ಸೌಲಭ್ಯ ಹಾಗೂ ಸಹಕಾರವನ್ನು ಸರಿಯಾಗಿ ಬಳಸಿಕೊಂಡು ವಹಿವಾಟು ಹೆಚ್ಚಿಸಿಕೊಳ್ಳಬೇಕು. ಆ ಮೂಲಕ ಮಹಿಳಾ ಉದ್ಯಮಿಗಳು ಆರ್ಥಿಕವಾಗಿ ಸಬಲರಾಗಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್‌ ರಿಲೀಫ್‌ ಮತ್ತು ವೆಲ್‌ಫೇರ್‌ ಸೊಸೈಟಿ ಜಂಟಿ ಕಾರ್ಯದರ್ಶಿ ಶ್ರೀಮತಿ ಪ್ರೇಮಾ ರತ್ನಾಕರ್‌, ಬ್ಯಾಂಕಿನ ಕೇಂದ್ರ ಕಚೇರಿಯ ಮಹಾಪ್ರಬಂಧಕ ಪಿ. ಅನಿಲ್‌ ಕುಮಾರ್‌, ಸೊಸೈಟಿಯ ಮಹಾಪ್ರಬಂಧಕ ಕೆ.ಎಸ್‌.ಎಸ್‌. ಕಾಮತ್‌, ಡಿಜಿಎಂ ಕೆ. ಪಳನಿವೇಲು ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next