Advertisement

ಕಾಂಬೋಡಿಯಾ ಹಾನರರಿ ಕೌನ್ಸುಲ್ ಆಗಿ ಬೆಂಗಳೂರಿನ ಕಾರ್ತಿಕ್ ತಲ್ಲಂ ನೇಮಕ

04:55 PM Aug 22, 2022 | Team Udayavani |

ಬೆಂಗಳೂರು : ಕಾಂಬೋಡಿಯಾ ರಾಷ್ಟ್ರದ ನೂತನ ಹಾನರರಿ ಕೌನ್ಸುಲ್ ಆಗಿ ( Honorory Consul) ಬೆಂಗಳೂರಿನ ಯುವ ಉದ್ಯಮಿ ಕಾರ್ತಿಕ್ ತಲ್ಲಂ ಅವರನ್ನು ನೇಮಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ, ತೆಲಂಗಾಣ,ಪಾಂಡಿಚೇರಿ ಮತ್ತು ಆಂಧ್ರಪ್ರದೇಶ ರಾಜ್ಯಗಳು ಇವರ ಕಾರ್ಯವ್ಯಾಪ್ತಿಯಾಗಿವೆ.

Advertisement

ಭಾರತ ಮತ್ತು ಕಾಂಬೋಡಿಯಾ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಕಾರ್ಯಚಟುವಟಿಕೆಗಳನ್ನು ಸಂಯೋಜಿಸುವ ಮತ್ತು ವ್ಯಾಪಾರ ವಹಿವಾಟು, ಸಂಬಂಧಗಳನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಕಾರ್ತಿಕ್ ತಲ್ಲಂ ಅವರು ನಿಭಾಯಿಸಲಿದ್ದಾರೆ.

ಕಾರ್ತಿಕ್ ಅವರ ಈ ನೇಮಕವನ್ನು ಭಾರತದ ರಾಷ್ಟ್ರಪತಿಗಳ ಅಂಕಿತದೊಂದಿಗೆ ಕಾಂಬೋಡಿಯಾ ಸರ್ಕಾರವು ಅಧಿಕೃತ ಪ್ರಕಟಣೆಯಲ್ಲಿ ಘೋಷಿಸಿದೆ. ಕಾರ್ತಿಕ್ ಅವರು ಈಗಾಗಲೇ ಅನೇಕ ಅಂತರರಾಷ್ಟ್ರೀಯ ಸಭೆ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಲ್ಲದೇ, FKCCIನಲ್ಲಿಯೂ ಸಕ್ರಿಯವಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next