Advertisement

Cafe ಸ್ಪೋಟ; ಶಂಕಿತ ಹುಮನಾಬಾದ್ ನಲ್ಲಿ ಓಡಾಡಿರುವ ಕುರಿತು ಸ್ಥಳೀಯರ ಶಂಕೆ

10:07 PM Mar 09, 2024 | Team Udayavani |

ಬೀದರ: ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದ ಶಂಕಿತ ಆರೋಪಿ ಕೆಲವು ದಿನಗಳ ಹಿಂದೆ‌ ಹುಮನಾಬಾದ್ ಪಟ್ಟಣದಲ್ಲಿ ಓಡಾಡಿರುವ ಕುರಿತು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಶನಿವಾರ ಇಲ್ಲಿನ ಪೊಲೀಸರು‌ ಸ್ಥಳಕ್ಕೆ ಭೇಟಿ ನೀಡಿ‌ ಮಾಹಿತಿ ಕಲೆಹಾಕುತ್ತಿದ್ದಾರೆ.

Advertisement

ಹುಮನಾಬಾದ್ ನ‌ ಜೈನ್ ಗಲ್ಲಿ ಹಾಗೂ ಬಿ.ಬಿ ಗಲ್ಲಿ ಪ್ರದೇಶದಲ್ಲಿ ಯಲ್ಲಿ ಸಂಚರಿಸಿದ್ದಾನೆ. ಬಪ್ಪಣ ಗಲ್ಲಿ ಹತ್ತಿರದ ಕಿರಾಣಿ ಅಂಗಡಿಯಲ್ಲಿ ಸಿಗರೇಟ್ ಪಡೆದು ಬೇರೆ ಕಡೆಗೆ ನಿಂತು ಸೇವನೆ ಮಾಡುತ್ತಿದ್ದ, ಆ ವ್ಯಕ್ತಿ ಸ್ಥಳೀಯ ವ್ಯಕ್ತಿಯಾಗಿರಲಿಲ್ಲ ಎಂದು ಜನರು ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಅಷ್ಟೇ ಅಲ್ಲ ಸ್ಥಳೀಯ ಅಂಗಡಿಗಳ ಮಾಲೀಕರು ಕೂಡ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾದ ವ್ಯಕ್ತಿಯೇ ಆತನಿದ್ದ ಎನ್ನುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next