Advertisement

Rameswaram Cafe Case; ಕುಲಕರ್ಣಿ, ಪಟೇಲ್‌ ಹೆಸರಲ್ಲಿ ಕೆಫೆ ಬಾಂಬರ್‌ಗಳ ಸುತ್ತಾಟ !

01:14 AM Apr 14, 2024 | Team Udayavani |

ಹೊಸದಿಲ್ಲಿ: ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ನಡೆಸಿ ಸಿಕ್ಕಿಬಿದ್ದಿರುವ ಇಬ್ಬರು ಶಂಕಿತ ಉಗ್ರರು ತಮ್ಮ ಗುರುತು ಮರೆಮಾಚಲು ಕುಲಕರ್ಣಿ, ಪಟೇಲ್‌ ಮತ್ತಿತರ ಹಿಂದೂ ಹೆಸರುಗಳನ್ನು ಬಳಸಿಕೊಳ್ಳುತ್ತಿದ್ದರು ಎಂಬ ವಿಚಾರ ತಿಳಿದು ಬಂದಿದೆ.

Advertisement

ದಿಘಾ ಪಟ್ಟಣದಲ್ಲಿ ಎನ್‌ಐಎ ಶಂಕಿತ ಉಗ್ರ ರಾದ ಮುಸಾವಿರ್‌ ಮತ್ತು ತಾಹಾನನ್ನು ಶುಕ್ರವಾರ ಬಂಧಿಸಿತ್ತು. ಮಾ. 25ರಂದು ಅವರಿಬ್ಬರು, “ನಾವು ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರವಾಸಿಗರು’ ಎಂದು ಹೇಳಿ ನ್ಯೂ ದಿಘಾದ ಗೆಸ್ಟ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದರು.

ಸೂತ್ರಧಾರಿ ತಾಹಾನು ವಿಘ್ನೇಶ್‌ ಬಿ.ಡಿ., ಅನ್ಮೋಲ್‌ ಕುಲಕರ್ಣಿ ಹೆಸರಿನಲ್ಲಿ ಮತ್ತು ಶಾಜೀಬ್‌ ಮಹಾರಾಷ್ಟ್ರದ ಪಾಲ್ಗಾರ್‌ನ ಯುಶಾ ಶಹನ್‌ವಾಜ್‌ ಪಟೇಲ್‌ ಹೆಸರಿನಲ್ಲಿ ಕೋಲ್ಕೊತಾದ ವಿವಿಧ ಲಾಡ್ಜ್ಗಳಲ್ಲಿ ವಾಸ್ತವ್ಯ ಹೂಡಿದ್ದರು. ಇನ್ನು ಕೆಲವು ಕಡೆ ಅವರು ಝಾರ್ಖಂಡ್‌ ಮತ್ತು ತ್ರಿಪುರಾದ ಸಂಜಯ್‌ ಅಗರ್ವಾಲ್‌ ಮತ್ತು ಉದಯ್‌ ದಾಸ್‌ ಹೆಸರಿನಲ್ಲಿ ತಂಗಿದ್ದರು ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

ಸಿಸಿಟಿವಿ ವೀಡಿಯೋ ಬಹಿರಂಗ: ಇನ್ನೊಂದೆಡೆ ಶಂಕಿತ ಉಗ್ರ ರಾದ ಶಾಜೀಬ್‌ ಮತ್ತು ತಾಹಾ ಇಬ್ಬರೂ ಕೋಲ್ಕತಾದ ಇಕ್ಬಾಲ್‌ಪುರ್‌ ಗೆಸ್ಟ್‌ ಹೌಸ್‌ನಲ್ಲಿ ಪ್ರವೇಶ ಪಡೆದ ಸಿಸಿಟಿವಿ ದೃಶ್ಯಾವಳಿಗಳು ಕೂಡ ಈಗ ಬಯಲಾಗಿವೆ. ಮುಸಾವಿರ್‌ ಹುಸೇನ್‌ ಶಾಜೀಬ್‌ ರಾಮೇಶ್ವರ್‌ ಕೆಫೆಯಲ್ಲಿ ಬಾಂಬ್‌ ಇಟ್ಟ ವ್ಯಕ್ತಿಯಾದರೆ ಮತೀನ್‌ ಇಡೀ ಬಾಂಬ್‌ ಸ್ಫೋಟದ ಹಿಂದಿನ ಮುಖ್ಯ ಸಂಚುಕೋರನಾಗಿದ್ದಾನೆ ಎಂದು ಎನ್‌ಐಎ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next