Advertisement

Cafe Case; ಬಳ್ಳಾರಿಯಲ್ಲಿ ಆರೋಪಿ ಓಡಾಟ; ಆಟೋ ಚಾಲಕರ ವಿಚಾರಣೆ

11:17 AM Mar 09, 2024 | Team Udayavani |

ಬಳ್ಳಾರಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ರಾಮೇಶ್ವರಂ ಕಫೆ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯು ಬಳ್ಳಾರಿಯಲ್ಲಿ ತಿರುಗಾಡಿರುವ ಬಗ್ಗೆ ಸುಳಿವು ದೊರೆತಿದೆ. ಬಳ್ಳಾರಿ ನಿಲ್ದಾಣದಲ್ಲಿ ಬಸ್ ಇಳಿದು ಹೊರಬಂದಿರುವ ಬಾಂಬರ್ ಆಟೋ ಹತ್ತಿ ತೆರಳಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಹಿನ್ನೆಲೆಯಲ್ಲಿ ಎನ್ ಐಎ ಅಧಿಕಾರಿಗಳು ಆಟೋ ಚಾಲಕನನ್ನು ವಿಚಾರಣೆ ನಡೆಸಿದ್ದಾರೆ.

Advertisement

ಬಸ್ ನಿಲ್ದಾಣದಿಂದ ಆಟೋದಲ್ಲಿ ತೆರಳಿದ ಬಾಂಬರ್ ಸಮೀಪದ ಮೋತಿ ವೃತ್ತದಲ್ಲಿ ಆಟೊ ಇಳಿದು ಹೋಗಿದ್ದು, ಯಾವ ಕಡೆ ಹೋಗಿದ್ದಾನೆಂಬುದು ಗೊತ್ತಿಲ್ಲ ಎಂದು ಆಟೊ ಚಾಲಕನು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಸಿಸಿ ಟಿವಿಯಲ್ಲಿರುವ ಆರೋಪಿ ಬಗ್ಗೆ ಎನ್ಐಎ ತಂಡ ಹತ್ತಾರು ಕಡೆ ವಿಚಾರಣೆ ಮಾಡುತ್ತಿದೆ. ಬಳ್ಳಾರಿ ಪೊಲೀಸರ ಸಹಕಾರದಿಂದ ಆಟೋ ಚಾಲನ ವಿಚಾರಣೆ ನಡೆಸಲಾಗುತ್ತಿದ್ದು, ಆರೋಪಿಯ ಸಿಸಿಟಿವಿ ದೃಶ್ಯ ಮತ್ತು ರೇಖಾಚಿತ್ರ ತೋರಿಸಿ ವಿಚಾರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next