Advertisement
ಆರಂಭದಲ್ಲಿ ಬೈರತಿ ವಿರುದ್ಧ ನಂದೀಶ್ ರೆಡ್ಡಿ ಮುನಿಸಿಕೊಂಡಿದ್ದರೂ, ನಂತರ ಬಿಎಸ್ವೈ ಅವರ ಸಂಧಾನದ ಫಲವಾಗಿ ಬಿಎಂಟಿಸಿ ಅಧ್ಯಕ್ಷ ಸ್ಥಾನ ಪಡೆದುಕೊಂಡು, ಬಸವರಾಜ್ ಪರವಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಕ್ಷೇತ್ರವ್ಯಾಪ್ತಿಯ ಕಾಂಗ್ರೆಸ್ನ ನಾಲ್ವರು ಕಾರ್ಪೊರೇಟರ್ಗಳು ಬೈರತಿ ಬಸವರಾಜ್ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ. ಬಿಜೆಪಿಯ ಮೂವರು ಕಾರ್ಪೊರೇಟರ್ಗಳಿದ್ದು, ಬೈರತಿ ಬಲ ಹೆಚ್ಚಾದಂತೆ ಕಾಣುತ್ತಿದೆ. ಆದರೆ, ಅನರ್ಹ ಎಂಬ ಹಣೆಪಟ್ಟಿ ಗುಪ್ತಗಾಮಿನಿಯಾಗಿ ಮತದಾರರ ಮನದಲ್ಲಿ ಹರಿಯುತ್ತಿದ್ದು, ಅದು ಅವರ ವಿರುದ್ಧದ ಮತವಾಗಿ ಚಲಾವಣೆಯಾದರೆ, ದೊಡ್ಡ ಶಾಕ್ ಎದುರಾಗಲಿದೆ.
Related Articles
Advertisement
ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ಕೆ.ಜೆ.ಜಾರ್ಜ್ ಹಾಗೂ ರಾಮಲಿಂಗಾ ರೆಡ್ಡಿ ಅವರನ್ನು ಕಾಂಗ್ರೆಸ್ ನೇಮಿಸಿದ್ದು, ಬೈರತಿ ಬಸವರಾಜ್ ಜಾರ್ಜ್ ವಿರುದ್ಧ ಆರೋಪ ಮಾಡಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದರಿಂದ ಜಾರ್ಜ್ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅಭ್ಯರ್ಥಿಗಿಂತ ಹೆಚ್ಚು ಸಕ್ರೀಯವಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಜತೆಗೆ ರಾಮಲಿಂಗಾ ರೆಡ್ಡಿಯವರು ಬೈರತಿಯವರನ್ನು ಸೋಲಿಸಲು ಹಠ ತೊಟ್ಟಿರುವುದು ಕಾಂಗ್ರೆಸ್ ಅಭ್ಯರ್ಥಿಗೆ ಪ್ಲಸ್ ಆಗಿದೆ.
ನಾಯಕರ ಪ್ರಭಾವ: ಈ ಕ್ಷೇತ್ರದಲ್ಲಿ ಒಕ್ಕಲಿಗ ಮತ ದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಡಿ.ಕೆ.ಶಿವಕುಮಾರ್ ಅವರ ವಿಷಯದಲ್ಲಿ ನಡೆದ ಬೆಳವಣಿಗೆ ಪ್ರಭಾವ ಬೀರುವಂತೆ ಆಗಿದೆ. ಅಲ್ಲದೇ ದಲಿತ, ಅಲ್ಪ ಸಂಖ್ಯಾತ ಮತಗಳು ಹೆಚ್ಚಾಗಿರುವುದರಿಂದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಭಾವ ಇದೆ. ಬಿಜೆಪಿಯಲ್ಲಿ ಸ್ಥಳೀಯ ನಾಯಕ ನಂದೀಶ್ ರೆಡ್ಡಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಪ್ರಭಾವ ಕ್ಷೇತ್ರದಲ್ಲಿದೆ. ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯ ಹೆಚ್ಚಿನ ಸಂಖ್ಯೆ ಯಲ್ಲಿದ್ದು, ಸೋಲು-ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ದಲಿತರು ಹಾಗೂ ಅಲ್ಪಸಂಖ್ಯಾತ ಸಮು ದಾಯದ ಮತದಾರರು ಅಷ್ಟೇ ದೊಡ್ಡ ಪ್ರಮಾಣದಲ್ಲಿ ರುವುದರಿಂದ ಅವರ ನಡೆಯೂ ಅಭ್ಯರ್ಥಿಗಳ ಭವಿಷ್ಯವನ್ನು ಬದಲಾಯಿಸುವ ಸಾಧ್ಯತೆ ಹೆಚ್ಚಿದೆ.
ಕ್ಷೇತ್ರದ ಇತಿಹಾಸ: ಕೆ.ಆರ್.ಪುರಂ ಮೂಲ ಕಾಂಗ್ರೆಸ್ನ ಭದ್ರಕೋಟೆ ಯಾಗಿತ್ತು. 2008ರಲ್ಲಿ ವರ್ತೂರು ಕ್ಷೇತ್ರದಿಂದ ಇಬ್ಭಾಗವಾಗಿ ಕೆ.ಆರ್.ಪುರಂ ಹೊಸ ಕ್ಷೇತ್ರವಾಗಿ ರೂಪ ಗೊಂಡ ನಂತರ ಬಿಜೆಪಿ ಮೊದಲ ಬಾರಿಗೆ ತನ್ನ ಖಾತೆ ತೆರೆದಿತ್ತು. ನಂದೀಶ್ ರೆಡ್ಡಿ ಕಾಂಗ್ರೆಸ್ನ ಹಿರಿಯ ನಾಯಕ ರಾಗಿದ್ದ ಎ.ಕೃಷ್ಣಪ್ಪ ವಿರುದ್ಧ ಜಯ ಗಳಿಸುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಅಸ್ತಿತ್ವ ಕಾಣುವಂತೆ ಮಾಡಿದ್ದರು. ಆದರೆ, 2013ರಲ್ಲಿ ಕಾಂಗ್ರೆಸ್ನಲ್ಲಿ ಎ.ಕೃಷ್ಣಪ್ಪ ಅವರಿಗೆ ಟಿಕೆಟ್ ತಪ್ಪಿಸಿ ಸಿದ್ದರಾಮಯ್ಯ ತಮ್ಮದೇ ಸಮುದಾಯಕ್ಕೆ ಸೇರಿದ್ದ ಬೈರತಿ ಬಸವರಾಜ್ ಅವರಿಗೆ ಟಿಕೆಟ್ ನೀಡಿ ದ್ದರು. ಚುನಾವಣೆಯಲ್ಲಿ ಗೆದ್ದು ಬೈರತಿ ಭರವಸೆ ಉಳಿಸಿ ಕೊಂಡಿದ್ದರು. 2018 ರಲ್ಲಿಯೂ ಜಯಸಾಧಿಸಿದ್ದರು.
ಪ್ರಮುಖ ವಿಷಯ: ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಭಿವೃದ್ಧಿಗಾಗಿ ಕಾಂಗ್ರೆಸ್ ತೊರೆದಿರುವುದಾಗಿ ಹೇಳುತ್ತಿದ್ದು, ಕಾಂಗ್ರೆಸ್ ಕೂಡ ಬೈರತಿ ಬಸವರಾಜ್ ಪಕ್ಷಾಂತರ ಮಾಡಿ ಅನರ್ಹರಾಗಿದ್ದಾರೆ. ಅಲ್ಲದೇ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಲ್ಲ ರೀತಿಯ ಸವಲತ್ತು ಪಡೆದು ಸರ್ಕಾರ ಹಾಗೂ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎನ್ನುವ ವಿಷಯವೇ ಹೆಚ್ಚು ಚರ್ಚೆಯಾಗುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಇತ್ತೀಚೆಗೆ ತೆಗೆದುಕೊಂಡ ಸಂವಿಧಾನದ 370ನೆ ವಿಧಿ ರದ್ದತಿ, ತ್ರಿವಳಿ ತಲಾಖ್ ರದ್ದತಿ ಹಾಗೂ ರಾಮಮಂದಿರ ವಿಷಯ ಗೌಣವಾಗಿವೆ.
ಜಾತಿ ಲೆಕ್ಕಾಚಾರಒಕ್ಕಲಿಗ -75000
ಎಸ್ಸಿ, ಎಸ್ಟಿ-63000
ಅನ್ಯ ಭಾಷಿಕರು-50000
ಯಾದವರು-25000
ಮುಸ್ಲಿಂ 38000
ಕ್ರಿಶ್ಚಿಯನ್-35000
ಬ್ರಾಹ್ಮಣರು -12000
ಲಿಂಗಾಯತ-2000 ಒಟ್ಟು ಮತದಾರರು-4.87 ಲಕ್ಷ
ಪುರುಷರು-2.55 ಲಕ್ಷ
ಮಹಿಳೆಯರು-2.32 ಲಕ್ಷ
ಇತರ-164
ಹೊಸ ಮತದಾರರು-6,580 * ಶಂಕರ ಪಾಗೋಜಿ