Advertisement

Byndoor; ಶಿರೂರು ಇಬ್ಬರು ಮೀನುಗಾರರು ಸಮುದ್ರ ಪಾಲು

09:12 PM Aug 27, 2023 | Team Udayavani |

ಬೈಂದೂರು: ಕೈರಂಪಣಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದ ನಾಲ್ವರು ಮೀನುಗಾರರಲ್ಲಿ ಇಬ್ಬರು ಮೀನುಗಾರರು ಸಮುದ್ರ ಪಾಲಾದ ಘಟನೆ ರವಿವಾರ ಸಂಜೆ ಶಿರೂರು ಅಳ್ವೆಗದ್ದೆಯಲ್ಲಿ ನಡೆದಿದೆ.

Advertisement

ಶಿರೂರು ಗ್ರಾಮದ ಕೆಸರಕೋಡಿ ನಿವಾಸಿಗಳಾದ ಗಂಗೊಳ್ಳಿ ಮುಸಾಭ್‌(22) ಹಾಗೂ ನಝಾನ್‌(24) ಮೃತಪಟ್ಟ ದುದೈವಿಗಳಾಗಿದ್ದಾರೆ.

ಕಳೆದ ಹಲವು ಸಮಯದಿಂದ ಇವರ ಕುಟುಂಬ ಮೀನುಗಾರಿಕೆ ಮೂಲಕ ಜೀವನ ನಡೆಸುತ್ತಿದೆ . ಭಾನುವಾರ ಸಂಜೆ ಸ್ಥಳೀಯ ನಾಲ್ವರು ಕೈರಂಪಣಿ ಮೀನುಗಾರಿಕೆಗೆ ತೆರಳಿದ್ದರು.ಸಮುದ್ರ ಪ್ರಕ್ಷುಬ್ದ ಇರುವ ಕಾರಣ ಇಬ್ಬರು ಮೀನುಗಾರರು ಆಯತಪ್ಪಿ ಕಡಲ ಪಾಲಾಗಿದ್ದಾರೆ.ತಕ್ಷಣ ಇಲ್ಲಿನ ಸ್ಥಳೀಯ ಮೀನುಗಾರರು ಶೋಧಕ್ಕಾಗಿ ಪ್ರಯತ್ನಿಸಿದರು ಕೂಡ ಪತ್ತೆಯಾಗಿಲ್ಲ.ಶೋಧ ಕಾರ್ಯ ಮುಂದುವರಿದಿದೆ.

ಹದಿನೈದು ದಿನದ ಹಿಂದೆ ದುಬೈನಿಂದ ಬಂದಿದ್ದ
ಮೃತಪಟ್ಟಿರುವ ನಝಾನ್‌ ದುಬಾೖಯಲ್ಲಿ ಸೂಪರ್‌ಮಾರ್ಕೆಟ್‌ ನಲ್ಲಿ ಉದ್ಯೋಗದಲ್ಲಿದ್ದು ಹದಿನೈದು ದಿನದ ಹಿಂದೆ ರಜೆಗಾಗಿ ಊರಿಗೆ ಬಂದಿದ್ದ.ಬೈಂದೂರು ಭಾಗದಲ್ಲಿ ಕಳೆದ ಎರಡು ತಿಂಗಳಲ್ಲಿ ನಾಲ್ಕಕ್ಕೂ ಅಧಿಕ ಇಂತಹ ಅವಘಡ ಸಂಭವಿಸಿದ್ದು ಅಳ್ವೆಗದ್ದೆ ಪರಿಸರದಲ್ಲಿ ಕಳೆದ ತಿಂಗಳು ದೋಣಿ ಮಗುಚಿ ಕೂದಳೆಯ ಅಂತರದಲ್ಲಿ ಮೀನುಗಾರರು ಪಾರಾಗಿದ್ದರು.

ಭಾನುವಾರ ನಡೆದ ಈ ಘಟನೆ ಶಿರೂರು ಕಳುಹಿತ್ಲು ಭಾಗದ ಮೀನುಗಾರರಿಗೆ ಆಘಾತ ನೀಡಿದೆ.

Advertisement

ಘಟನ ಸ್ಥಳಕ್ಕೆ ಬೈಂದೂರು ಠಾಣಾಧಿಕಾರಿ ನಿರಂಜನ ಗೌಡ,ಅಗ್ನಿಶಾಮಕ ದಳ, ಕರಾವಳಿ ಕಾವಲು ಪಡೆ, ತಹಶೀಲ್ದಾರರು ಆಗಮಿಸಿದ್ದರು. ಸ್ಥಳೀಯ ಮುಖಂಡರು, ಮೀನುಗಾರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next