Advertisement

Byndoor ವಿಧಾನಸಭಾ ಕ್ಷೇತ್ರ : 300 ಶಾಲೆ ಅಭಿವೃದ್ಧಿಗೆ ಚಾಲನೆ

11:06 PM Oct 07, 2023 | Team Udayavani |

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಗುರುರಾಜ ಗಂಟಿಹೊಳೆ ಅವರ ಕನಸಿನ 300 ಸರಕಾರಿ ಶಾಲೆಗಳ ಉಳಿವು ಮತ್ತು ಅಭಿವೃದ್ಧಿಗಾಗಿ “300 ಮರಗಳು (ಟ್ರೀಸ್‌)’ ವಿಶಿಷ್ಟ ಯೋಜನೆಯ ಉದ್ಘಾಟನೆ ಹಾಗೂ ಸಮೃದ್ಧ ಬೈಂದೂರು ಪರಿಕಲ್ಪನೆಯ ಅನಾವರಣ ಕಾರ್ಯಕ್ರಮ ಶನಿವಾರ ತ್ರಾಸಿಯ ಕೊಂಕಣ ಖಾರ್ವಿ ಸಭಾಭವನದಲ್ಲಿ ನಡೆಯಿತು.

Advertisement

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ 48 ಸಾವಿರ ಸರಕಾರಿ ಶಾಲೆಗಳಿದ್ದು, 1 ಕೋಟಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ವರ್ಷದಿಂದ ವರ್ಷಕ್ಕೆ ಸರಕಾರಿ ಶಾಲೆಗಳ ಗುಣಮಟ್ಟ ಕುಸಿಯುತ್ತಿದ್ದು, ಮುಂದಿನ 5 ವರ್ಷಗಳಲ್ಲಿ 10 ಸಾವಿರ ಸರಕಾರಿ ಶಾಲೆಗಳು ಮಕ್ಕಳಿಲ್ಲದೆ ಮುಚ್ಚುವ ಆತಂಕವಿದೆ. ಆ ನಿಟ್ಟಿನಲ್ಲಿ ಬೈಂದೂರು ಕ್ಷೇತ್ರದ 300 ಸರಕಾರಿ ಶಾಲೆಗಳ ಅಭಿವೃದ್ಧಿಗೆ, ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಪಣ ತೊಟ್ಟಿರುವುದು, ಉದ್ಯೋಗ ಸೃಷ್ಟಿಗೆ ಮುಂದಾಗಿರುವುದು ರಾಜ್ಯದಲ್ಲಿಯೇ ಕ್ರಾಂತಿಕಾರಿ ಯೋಜನೆಯಾಗಿದೆ ಎಂದು ಶ್ಲಾಘಿಸಿದರು.

ಸರಕಾರದ ಅನುದಾನದ ಬರುತ್ತಿಲ್ಲ ವೆಂದು ಸುಮ್ಮನೆ ಕುಳಿತುಕೊಳ್ಳದೇ ದಾನಿಗಳು, ಸಂಘ-ಸಂಸ್ಥೆಗಳು, ಉದ್ಯಮಿ ಗಳ ನೆರವಿನೊಂದಿಗೆ ಬೈಂದೂರಿನ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿರುವ ಗುರುರಾಜ್‌ ಗಂಟಿಹೊಳೆ ಎಲ್ಲ ಶಾಸಕರಿಗೂ ಮಾದರಿ ಯಾಗಿದ್ದಾರೆ. ಸುಂದರ, ಸಮೃದ್ಧ ಬೈಂದೂರು ಯೋಜನೆ ಸಾಕಾರಗೊಳ್ಳಲಿ. ಸಾಮಾನ್ಯ ಕಾರ್ಯಕರ್ತನನ್ನು ಗೆಲ್ಲಿಸಿದ ಬೈಂದೂರಿನ ಜನರು ನಿಜವಾಗಿಯೂ ಸಮರ್ಥರು ಎಂದು ಹಿರಿಯ ಪತ್ರಕರ್ತ ಹರಿಪ್ರಕಾಶ್‌ ಕೋಣೆಮನೆ ಹೇಳಿದರು.

ಡಾ| ಎಚ್‌.ಎಸ್‌. ಶೆಟ್ಟಿ ಅಭಿನಂದನೆ
ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಯಿಂದ “ಡಾಕ್ಟರ್‌ ಆಫ್‌ ಸೈನ್ಸ್‌’ ಗೌರವ ಪುರಸ್ಕೃತ, ಉದ್ಯಮಿ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್‌ ಸೊಸೈಟಿ ಅಧ್ಯಕ್ಷ ಡಾ| ಶ್ರೀನಿವಾಸ ಶೆಟ್ಟಿ ಹಾಲಾಡಿ (ಎಚ್‌.ಎಸ್‌. ಶೆಟ್ಟಿ) ಅವರನ್ನು ಅಭಿನಂದಿಸಲಾಯಿತು.

ಕುಂದಾಪುರ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ, ಕೊಲ್ಲೂರು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಕಾರವಾರದ ಒಬಿಜಿ ಮೆಡಿಕಲ್‌ ಕಾಲೇಜಿನ ಪ್ರಾಧ್ಯಾಪಕ ಡಾ| ಅಣ್ಣಪ್ಪ ಶೆಟ್ಟಿ, ಲೆಕ್ಕ ಪರಿಶೋಧಕ ಶಾಂತಾರಾಮ ಶೆಟ್ಟಿ ಮಂಗಳೂರು, ಉದ್ಯಮಿ ಜನಾರ್ದನ ದೇವಾಡಿಗ ಮುಂಬಯಿ, ತ್ರಾಸಿ ಗ್ರಾ.ಪಂ. ಅಧ್ಯಕ್ಷ ಮಿಥುನ್‌ ದೇವಾಡಿಗ, ಭಗವದ್ಗೀತೆ ಅಭಿಯಾನದ ಜಿಲ್ಲಾ ಸಂಚಾಲಕ ರಾಮಕೃಷ್ಣ ಶೇರಿಗಾರ್‌ ಉಪಸ್ಥಿತರಿದ್ದರು.

Advertisement

ಉದ್ಯಮಿ ಬಿ.ಎಸ್‌. ಸುರೇಶ್‌ ಶೆಟ್ಟಿ ಪ್ರಸ್ತಾವನೆಗೈದರು. ರಾಘವೇಂದ್ರ ಆಚಾರ್ಯ ಸ್ವಾಗತಿಸಿ, ಶಿಕ್ಷಕ ಸುಬ್ರಹ್ಮಣ್ಯ ಉಪ್ಪುಂದ ನಿರೂಪಿಸಿದರು.

ಅಧ್ಯಕ್ಷತೆ ವಹಿಸಿದ್ದ ಗುರುರಾಜ ಗಂಟಿಹೊಳೆ ಮಾತನಾಡಿ, ಬೈಂದೂರಿನ ಜನರ ಹಾಗೂ ನನ್ನನ್ನು ಗೆಲ್ಲಿಸಲು ಶ್ರಮಿಸಿದ ಎಲ್ಲರ ಋಣ ತೀರಿಸುವ ಕೆಲಸವಿದು. 300 ಟ್ರೀಸ್‌- ಸರಕಾರಿ ಶಾಲೆಗಳ ಅಭಿವೃದ್ಧಿ ಯೋಜನೆ. ಮುಂದೆ ಅದರಲ್ಲಿ 30 ಶಾಲೆಗಳನ್ನು ಮಾದರಿ, ಅದರಲ್ಲಿ 3 ಶಾಲೆಗಳನ್ನು ರಾಜ್ಯದಲ್ಲಿಯೇ ಅತ್ಯುತ್ತಮ ಶಾಲೆಯಾಗಿಸುವ ಗುರಿಯಿದೆ. ಸರಕಾರಿ ಶಾಲೆ ಸರಕಾರದ್ದಲ್ಲ, ನಮ್ಮ ಸ್ವಂತದ್ದುಅನ್ನುವ ಮನೋಭಾವ ಬೆಳೆಯ ಬೇಕು. ಅದು ಬೆಳಗಿದರೆ, ಬಡವರ ಮನೆ ಬೆಳಗಿದಂತೆ. ಸರಕಾರಿ ಆಸ್ಪತ್ರೆಗ ಳಲ್ಲಿ ಡಯಾಲಿಸಿಸ್‌ ಸಹಿತ ಇನ್ನಿತರ ಸವಲತ್ತುಗಳನ್ನು ಅಭಿವೃದ್ಧಿಪಡಿಸುವ ಮಹದಾಸೆಯಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next