Advertisement

ಯೋಧ ಮಲ್ಲಪ್ಪಗೆ ಅಂತಿಮ ನಮನ

05:38 PM Apr 15, 2020 | Naveen |

ಬ್ಯಾಡಗಿ: ತೀವ್ರ ಅನಾರೋಗ್ಯದಿಂದ ನಾಗಪುರ (ಮಹಾರಾಷ್ಟ್ರ) ಮಿಡಾಸ್‌ ಹಾಸ್ಪಿಟಲ್‌ನಲ್ಲಿ ನಿಧನರಾಗಿದ್ದ ಸಿಆರ್‌ ಪಿಎಫ್‌ ಯೋಧ ಮಲ್ಲಪ್ಪ ಸಂಗಪ್ಪ ಧನ್ನೂರ (52) ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಪಟ್ಟಣದ ವೀರಶೈವ ಮುಕ್ತಿಧಾಮದಲ್ಲಿ ಮಂಗಳವಾರ ನೆರವೇರಿಸಲಾಯಿತು.

Advertisement

ಯೋಧನ ಪಾರ್ಥಿವ ಶರೀರವು ಮಧ್ಯಾಹ್ಮ 4 ಗಂಟೆ ಸುಮಾರಿಗೆ ಪಟ್ಟಣವನ್ನು ಪ್ರವೇಶಿಸಿತು. ಯೋಧನ ಶರೀರಕ್ಕೆ ಸ್ವಗೃಹದಲ್ಲಿ ಕುಟುಂಬಸ್ಥರು ಅಂತಿಮ ನಮನ ಸಲ್ಲಿಸಿದರು. ಮಿಲಿಟರಿ ಪಡೆಗಳಿಂದ, ಪೊಲೀಸರಿಂದ ಗಾರ್ಡ್‌ ಆಫ್‌ ಆನರ್‌ ಸಲ್ಲಿಸಲಾಯಿತು. ಬಳಿಕ ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು. ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ವರ್ತಕ ಎಸ್‌.ಆರ್‌. ಪಾಟೀಲ, ತಹಶೀಲ್ದಾರ್‌ ಶರಣಮ್ಮ, ಮುಖ್ಯಾಧಿಕಾರಿ ವಿ.ಎಂ. ಪೂಜಾರ, ಸಿಪಿಐ ಭಾಗ್ಯವತಿ ಮೊದಲಾದವರು ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next