Advertisement

ಗಜಾನನ ಸಹಕಾರ ಸಂಘದಿಂದ ಶೇ. 15 ಲಾಭಾಂಶ ಘೋಷಣೆ

05:13 PM Jun 22, 2018 | |

ಹುಬ್ಬಳ್ಳಿ: ಶ್ರೀ ಗಜಾನನ ಅರ್ಬನ್‌ ಕೋ-ಆಪ್‌ ಕ್ರೆಡಿಟ್‌ ಸೊಸೈಟಿಯ ವಾರ್ಷಿಕ ಮಹಾಸಭೆ ನಗರದ ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆಯಿತು. ಸಂಘದ ಅಧ್ಯಕ್ಷ ಗುರುಸಿದ್ದಪ್ಪ ಯಕಲಾಸಪುರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ಸಂಘದ ಸದಸ್ಯರಿಗೆ ಶೇ.15 ಲಾಭಾಂಶ ಘೋಷಿಸಿದರಲ್ಲದೆ, ಕಡು ಬಡವ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸಂಘದ ವತಿಯಿಂದ ಶಿಕ್ಷಣ ಶುಲ್ಕ ಭರಿಸಲಾಗುತ್ತದೆ ಎಂದರು.

Advertisement

ಸಂಘದ ಆಡಳಿತ ಮಂಡಳಿ ಸದಸ್ಯರಾದ ಹರಿದಾಸ ಶೆಟ್ಟಿ, ಹರೀಶ ಮಹಾಜನ, ಮಹಾಬಳೇಶ್ವರ ಹೆಗಡೆ, ಪ್ರಭಾವತಿ ಇಂಗಳಹಳ್ಳಿ, ಮಹಾದೇವಪ್ಪ ಬೆಣಗಿ, ಸಂಗಪ್ಪ ಸವದತ್ತಿ, ಬಸವಣ್ಣಯ್ಯ ಹಿರೇಮಠ, ಹಿತೇಶಕುಮಾರ ಮೋದಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ವ್ಯವಸ್ಥಾಪಕ ಗಿರೀಶ ಕುಬಸದ ನಿರೂಪಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next