Advertisement

ಉಚ್ಚಿಲ ಹೊಸ ಬಸ್‌ ನಿಲ್ದಾಣಕ್ಕೆ ಹಾನಿ: ಕ್ರಮಕ್ಕೆ  ಆಗ್ರಹ

12:50 AM Jan 28, 2019 | Team Udayavani |

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಸರಸ್ವತಿ ಮಂದಿರ ಶಾಲೆಯ ಬಳಿ ನಮ್ಮೂರ ನಮ್ಮ ಜನ ಸಂಘಟನೆಯ ವತಿಯಿಂದ ನಿರ್ಮಿಸಲ್ಪಟ್ಟು ಕಳೆದ ವಾರವಷ್ಟೇ ಉದ್ಘಾಟನೆಗೊಂಡಿದ್ದ ಮಹಾಲಕ್ಷ್ಮೀ  ಬಸ್‌ ನಿಲ್ದಾಣವನ್ನು  ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ.

Advertisement

ಬಸ್‌ ನಿಲ್ದಾಣಕ್ಕೆ ಕಟ್ಟಲಾಗಿದ್ದ ಇಟ್ಟಿಗೆ ಕಲ್ಲುಗಳನ್ನು ಒಡೆದು ಹಾಕಿದ್ದು, ಇದರಿಂದ ಬಸ್‌ ನಿಲ್ದಾಣಕ್ಕೂ ಹಾನಿಯುಂಟಾಗಿದೆ. ಸಾರ್ವಜನಿಕ ಉಪಯೋಗಕ್ಕೆಂದು ಸಂಸ್ಥೆಯೊಂದು ನಿರ್ಮಿಸಿಕೊಟ್ಟಿರುವ ಬಸ್‌ ನಿಲ್ದಾಣಕ್ಕೆ ಹಾನಿಯುಂಟು ಮಾಡಿರುವುದು ಖಂಡನೀಯ.  ಬಸ್‌ ನಿಲ್ದಾಣಕ್ಕೆ ಹಾನಿಯುಂಟು ಮಾಡಿರುವ ಆರೋಪಿಗಳನ್ನು ಪತ್ತೆ ಹಚ್ಚುವಂತೆ ನಮ್ಮೂರ ನಮ್ಮ ಜನ ಸಂಘಟನೆ ಒತ್ತಾಯಿಸಿದೆ.

ಈ ಬಸ್‌ ತಂಗುದಾಣದಲ್ಲಿ ರಾತ್ರಿ ಸಮಯದಲ್ಲಿ ಗಾಂಜಾ ವ್ಯಸನಿಗಳು ತಂಗುತ್ತಿದ್ದು, ರಾತ್ರಿ ಗಸ್ತು ತಿರುಗುವ ಪೊಲೀಸರು ಈ ಬಗ್ಗೆ ಎಚ್ಚರಿಕೆ ವಹಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next