Advertisement

ಗೋವಾದಲ್ಲಿ ಕರ್ನಾಟಕದ ಬಸ್‌ ಭಸ್ಮ : ಪ್ರಯಾಣಿಕರು ಪಾರು 

12:02 PM Jul 04, 2018 | |

ಪೊಂಡಾ: ಇಲ್ಲಿ ಬುಧವಾರ ತಡ ರಾತ್ರಿ  ವಾಯುವ್ಯ ಕರ್ನಾಟಕ ಸಾರಿಗೆಗೆ ಸೇರಿದ ಬಸ್ಸೊಂದು ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಹೊತ್ತಿ ಉರಿದ ಘಟನೆ ನಡೆದಿದೆ. ಅದೃಷ್ಟವಷಾತ್‌ ಪ್ರಯಾಣಿಕರೆಲ್ಲರೂ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. 

Advertisement

ಗದಗದ ಮುಂಡರಗಿಗೆ ಬಸ್‌ ಆಗಮಿಸುತ್ತಿತ್ತು ಎಂದು ತಿಳಿದು ಬಂದಿದ್ದು, ಪ್ರಯಾಣಿಕರ ಲಗೇಜ್‌ಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ . 

ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬಂದಿಗಳು ಬೆಂಕಿ ನಂದಿಸಿದರು. ಬಸ್‌ ಸಂಪೂರ್ಣ ಸುಟ್ಟು ಹೋಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next