Advertisement

ಬೆಂವಿವಿ ವಿಸಿ ನೇಮಕ ವಿಚಾರದಲ್ಲಿ ಹಗ್ಗಜಗ್ಗಾಟ

11:21 AM Jul 19, 2017 | Team Udayavani |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ನಡುವೆ ಹಗ್ಗಾಜಗ್ಗಾಟ ಆರಂಭವಾಗಿದೆ. ಪ್ರೊ. ಬಿ. ತಿಮ್ಮೇಗೌಡ ಅವರ ಅವಧಿ ಮುಗಿದ ನಂತರ ಬೆಂವಿವಿ ಕುಲಪತಿ ಹುದ್ದೆ ಖಾಲಿ ಇದೆ. ಸದ್ಯ ಡಾ.ಎಂ.ಮುನಿರಾಜು ಅವರು ಹಂಗಾಮಿ ಕುಲಪತಿಯಾಗಿ ಆಡಳಿತ ನಿರ್ವಹಿಸುತ್ತಿದ್ದಾರೆ. ಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪ್ರೊ. ಎಸ್‌.ಆರ್‌. ನಿರಂಜನ ಅವರ ನೇತೃತ್ವದಲ್ಲಿ ಶೋಧನಾ ಸಮಿತಿ ರಚಿಸಿತ್ತು.

Advertisement

ಬೆಂವಿವಿ ಕುಲಪತಿ ಸ್ಥಾನಕ್ಕೆ ಬಂದಿರುವ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿದ ಶೋಧನಾ ಸಮಿತಿಯು ಬೆಂಗಳೂರು ಯುನಿರ್ವಸಿಟಿ ಕಾಲೇಜ್‌ ಆಫ್ಎಂಜಿನಿಯರಿಂಗ್‌(ಯುವಿಸಿಇ) ಪ್ರಾಂಶುಪಾಲರಾದ ಪ್ರೊ. ಕೆ.ಆರ್‌.ವೇಣುಗೋಪಾಲ್‌, ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ. ನಾಗಭೂಷಣ್‌ ಹಾಗೂ ಪ್ರೊ. ಸಂಗಮೇಶ್‌ ಪಾಟೀಲ್‌ ಅವರ ಹೆಸರನ್ನು ಅಂತಿಮಗೊಳಿಸಿ, ಸರ್ಕಾರಕ್ಕೆ ಸಲ್ಲಿಸಿತ್ತು. ಸರ್ಕಾರ ಅದನ್ನು ರಾಜ್ಯಪಾಲರಿಗೆ ಸಲ್ಲಿಸಿದೆ.

ಕಡತ ಪರಿಶೀಲಿಸಿದ ರಾಜ್ಯಪಾಲರು, ಪ್ರೊ. ಸಂಗಮೇಶ್‌ ಪಾಟೀಲ್‌ ಅವರ ಬದಲಿಗೆ ಪ್ರೊ. ಕೆ.ಆರ್‌.ವೇಣುಗೋಪಾಲ್‌ ಅವರನ್ನು ಕುಲಪತಿಯಾಗಿ ಏಕೆ ನೇಮಕ ಮಾಡಬಾರದು? ವೇಣುಗೋಪಾಲ್‌ ಅವರು ಪ್ರಾಂಶುಪಾಲರಾಗಿ ಅನುಭವ ಹೊಂದಿದ್ದಾರೆ ಮತ್ತು ಬೆಂಗಳೂರು ವಿಶ್ವವಿದ್ಯಾಲಯವನ್ನು ಬಲ್ಲರಾಗಿದ್ದಾರೆ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಳಿದ್ದಾರೆ ಎನ್ನಲಾಗಿದೆ.

ಹೀಗಾಗಿ ಬೆಂಗಳೂರು ವಿವಿ ಕುಲಪತಿ ನೇಮಕ ವಿಚಾರವಾಗಿ ರಾಜ್ಯಪಾಲರ ಮತ್ತು ಮುಖ್ಯಮಂತ್ರಿ ನಡುವೆ ಹಗ್ಗಜಗ್ಗಾಟ ಆರಂಭವಾಗಿದೆ. ಒಂದು ವೇಳೆ ವೇಣುಗೋಪಾಲ್‌ ಅವರ ನೇಮಕಕ್ಕೆ ಸಿಎಂ ಒಪ್ಪಿಗೆ ಸೂಚಿಸಿದರೆ. ಪ್ರಕರಣ ಶೀಘ್ರವೇ ಸುಖಾಂತ್ಯ ಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.

Next