Advertisement

Rakshith Shetty; ತಂಡ ಕಟ್ಟಿ ಗೆಲುವು ಸಾಧಿಸಿ: ಹೊಸಬರಿಗೆ ರಕ್ಷಿತ್‌ ಶೆಟ್ಟಿ ಕಿವಿಮಾತು

03:22 PM Aug 07, 2023 | Team Udayavani |

ಚಿತ್ರರಂಗಕ್ಕೆ ಹೊಸದಾಗಿ ಬರುವವರಿಗೆ ನಟ ರಕ್ಷಿತ್‌ ಶೆಟ್ಟಿ ಟಿಪ್ಸ್‌ ನೀಡಿದ್ದಾರೆ. ಅದು ಒಂದೊಂದು ತಂಡ ಕಟ್ಟಿ, ಒಳ್ಳೆಯ ಸಿನಿಮಾ ಮಾಡಿ ಬೆಳೆಯಿರಿ ಎಂಬುದು.

Advertisement

“ಟೋಬಿ’ ಚಿತ್ರದ ಟ್ರೇಲರ್‌ ರಿಲೀಸ್‌ ವೇದಿಕೆ ಮಾತನಾಡಿದ ರಕ್ಷಿತ್‌, “ಚಿತ್ರರಂಗಕ್ಕೆ ಬರುವವರು ತಮ್ಮದೇ ಆದ ಸಮಾನ ಮನಸ್ಕರ ಒಂದು ತಂಡ ಮಾಡಿಕೊಂಡು ಆ ಮೂಲಕ ಸಿನಿಮಾ ಮಾಡಿ ಗೆಲ್ಲಬೇಕು. “ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಕೂಡಾ ಒಂದು ತಂಡ ಮಾಡಿಕೊಂಡು ಯಾರ ಸಹಾಯವಿಲ್ಲದೇ ಸಿನಿಮಾ ಮಾಡಿ ಗೆದ್ದಿದ್ದಾರೆ. ನಾನು, ರಿಷಭ್‌ ಒಂದು ತಂಡವಾಗಿ ಸಿನಿಮಾ ಮಾಡಿದೆವು. ರಾಜ್‌ ಬಿ ಶೆಟ್ಟಿ ಕೂಡಾ ಅವರದೇ ಆದ ಒಂದು ತಂಡ ಕಟ್ಟಿಕೊಂಡು ಸಿನಿಮಾ ಮಾಡಿ ಗೆಲ್ಲುತ್ತಿದ್ದಾರೆ. ಹೊಸ ಹೊಸ ತಂಡಗಳು ಬಂದಾಗ ಹೊಸ ಬಗೆಯ ಕಥೆಗಳು ಹುಟ್ಟುತ್ತವೆ. ಇನ್ನು, ಉತ್ತರ ಕರ್ನಾಟಕದ ಸಂಸ್ಕೃತಿ ತುಂಬಾ ಶ್ರೀಮಂತವಾಗಿದೆ. ಅಲ್ಲಿನ ಕಥೆಗಳನ್ನು ಅಲ್ಲಿನವರು ಹೇಳಿದರೇನೇ ಚೆಂದ. ಹಾಗಾಗಿ, ಅಲ್ಲಿನವರು ಒಂದು ತಂಡವಾಗಿ ಬಂದು ಸಿನಿಮಾ ಮಾಡಬೇಕು. ನನ್ನ ಪ್ರಕಾರ ಚಿತ್ರರಂಗದಲ್ಲಿ ಕನಿಷ್ಠ 15 ಹೀರೋಗಳು, 15 ಗಟ್ಟಿ ನಿರ್ದೇಶಕರು ಬರಬೇಕು. ಆಗ ಚಿತ್ರರಂಗ ಹೆಚ್ಚು ಕ್ರಿಯಾಶೀಲವಾಗಿರುತ್ತದೆ’ ಎನ್ನುವುದು ರಕ್ಷಿತ್‌ ಶೆಟ್ಟಿ ಮಾತು.

ಅಂದಹಾಗೆ, ರಕ್ಷಿತ್‌ ಶೆಟ್ಟಿ ನಟನೆಯ “ಸಪ್ತಸಾಗರದಾಚೆ ಎಲ್ಲೋ-ಸೈಡ್‌-ಎ’ ಚಿತ್ರ ಸೆ.01ಕ್ಕೆ ತೆರೆಕಾಣುತ್ತಿದೆ

Advertisement

Udayavani is now on Telegram. Click here to join our channel and stay updated with the latest news.

Next