Advertisement

Budget ಮಂಡನೆ ಸಿಎಂಗೆ ತಂತಿ ಮೇಲಿನ ನಡಿಗೆ

12:23 AM Jan 18, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ 14 ಬಾರಿ ಬಜೆಟ್‌ ಮಂಡಿಸುವುದರ ಜತೆಗೆ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿದೆ. ಆದಾಗ್ಯೂ ಈ ಸಲದ ಬಜೆಟ್‌ ಮಂಡನೆ ದೊಡ್ಡ ಸವಾಲಾಗಲಿದ್ದು, ಅಕ್ಷರಶಃ ತಂತಿ ಮೇಲಿನ ನಡಿಗೆ ಆಗಿದೆ.

Advertisement

ಒಂದೆಡೆ ಈ ಹಿಂದಿನ ಬಿಜೆಪಿ ಅವಧಿಯಲ್ಲಿ ಆರ್ಥಿಕ ಅಶಿಸ್ತು ಇತ್ತು ಎಂದು ಸ್ವತಃ ಕಾಂಗ್ರೆಸ್‌ ಸರಕಾರ ಹೇಳಿದೆ. ಅದನ್ನು ಸರಿದಾರಿಗೆ ತರಬೇಕಿದೆ. ಮತ್ತೂಂದೆಡೆ ಐದೂ ಗ್ಯಾರಂಟಿಗಳಿಗೆ ಮೀಸಲಿಡಬೇಕಾದ ಮೊತ್ತ ಹಿಂದಿನ ವರ್ಷಕ್ಕೆ ಹೋಲಿಸಿದರೆ, ಶೇ. 40ರಷ್ಟು ಅಂದರೆ 56 ರಿಂದ 58 ಸಾವಿರ ಕೋಟಿ ರೂ.ಗಳಿಗೆ ಏರಿಕೆ ಆಗುವ ಸಾಧ್ಯತೆ ಇದೆ. ಕಳೆದ ಬಾರಿ ಗ್ಯಾರಂಟಿಗೆ ಅಂದಾಜು 35 ಸಾವಿರ ಕೋಟಿ ಮೀಸಲಿಡ ಲಾಗಿತ್ತು. ಇನ್ನೊಂದೆಡೆ ಕುಂಠಿತ ಗೊಂಡ “ಅಭಿವೃದ್ಧಿ ಯಂತ್ರ’ಕ್ಕೆ ವೇಗ ನೀಡಲು ಒಂದಿಷ್ಟು ಹಣ ನೀಡಬೇಕಾಗಿದೆ.

“ಖಂಡಿತ ಈ ಬಾರಿಯ ಬಜೆಟ್‌ ನಮಗೆ ದೊಡ್ಡ ಸವಾಲಾಗಿದೆ. ಗ್ಯಾರಂಟಿಗಳನ್ನು ಮುಂದುವರಿಸಿ ಕೊಂಡು ಹೋಗುವುದರ ಜತೆಗೆ 12 ತಿಂಗಳಿಗೆ ಹಣ ಮೀಸಲಿಡಬೇಕಾಗಿ ರುವು ದರಿಂದ 56-58 ಸಾವಿರ ಕೋಟಿ ರೂ.ಗೆ ಏರಿಕೆ ಆಗಲಿದೆ. ಹಿಂದಿನ ಸರಕಾ ರದ ಅವಧಿಯಲ್ಲಾದ ಬಿಲ್‌ಗ‌ಳನ್ನು ಕ್ಲಿಯರ್‌ ಮಾಡಿ, ಹೊಸ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಿದೆ. ಇದಕ್ಕೆ ಸಾಕಷ್ಟು ಅನುದಾನ ಬೇಕು. ಈ ಹಿನ್ನೆಲೆಯಲ್ಲಿ ಇದು ಸವಾಲು ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಸ್ಪಷ್ಟಪಡಿಸುತ್ತಾರೆ.

ಸವಾಲಿಗೆ ರಾಯರಡ್ಡಿ ಸಲಹೆ
ಈ ಸಂಬಂಧ “ಉದಯವಾಣಿ’ ಜತೆಗೆ ಮುಕ್ತ ವಾಗಿ ಮಾತನಾಡಿದ ಅವರು, “ಈ ಸವಾಲು ಎದುರಿಸಲು ಸರಕಾರ ಕೂಡ ಮಾನಸಿಕವಾಗಿ ಸಿದ್ಧವಾಗುತ್ತಿದೆ. ಸಂಪನ್ಮೂಲ ಕ್ರೋಢೀಕರಣಕ್ಕೆ ನಮ್ಮ ಮುಂದೆ ಸಾಕಷ್ಟು ದಾರಿಗಳಿವೆ. ಅದಕ್ಕೆ ಮನಸ್ಸು ಮಾಡಬೇಕಷ್ಟೇ. ಉದಾಹರಣೆಗೆ ಈಗಲೂ ಅನೇಕ ಅಂಗಡಿಗಳಲ್ಲಿ ಗ್ರಾಹಕರಿಗೆ ಸಮರ್ಪಕ ಬಿಲ್‌ ನೀಡುತ್ತಿಲ್ಲ. ಇದಕ್ಕೆ ಕಡಿವಾಣ ಹಾಕಿದರೆ, ರಾಜ್ಯದಲ್ಲಿ ಕನಿಷ್ಠ 10 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ಹೆಚ್ಚಲಿದೆ ಎಂಬುದು ನನ್ನ ಅಂದಾಜು. ಜತೆಗೆ ನೆರೆಯ ರಾಜ್ಯಗಳಿಗೆ ಹೋಲಿಸಿದರೆ, ಪೆಟ್ರೋಲ್‌-ಡೀಸೆಲ್‌ ಬೆಲೆ ನಮ್ಮಲ್ಲಿ ಕಡಿಮೆ ಇದೆ. ಹಾಗಾಗಿ, ಗಡಿಭಾಗಗಳಲ್ಲಿ ನೆರೆಯ ರಾಜ್ಯಗಳಿಂದ ಸಾಕಷ್ಟು ಪೆಟ್ರೋಲ್‌-ಡೀಸೆಲ್‌ ತುಂಬಿಸಿಕೊಂಡು ಹೋಗಲಾಗುತ್ತಿದೆ. ಇದಕ್ಕೆ ನಿಯಂತ್ರಣ ಹಾಕುವುದು. ನಗರಗಳ ಅಕ್ರಮ ಆಸ್ತಿಗಳನ್ನು ಸಕ್ರಮ ಗೊ ಳಿಸುವುದು, ನಗರಪ್ರದೇಶಗಳ ಆಸ್ತಿಗಳ ಮರುಸಮೀಕ್ಷೆ, ಗಣಿ ಮತ್ತು ಭೂವಿಜ್ಞಾನದಲ್ಲಿ ರಾಜಸ್ವ ಸಂಗ್ರಹದಂಥ ಹಲವು ಮಾರ್ಗಗಳಿವೆ. ಇದೆಲ್ಲವೂ ಸಾಧ್ಯವಾದರೆ 15 ಸಾವಿರ ಕೋಟಿ ರೂಪಾಯಿಗೂ ಅಧಿಕ ಸಂಪನ್ಮೂಲ ಹರಿದುಬರಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next