Advertisement

B. S. Yediyurappa ವರ್ತಮಾನದ ದುರಂತ ನಾಯಕ: ರಮೇಶ್‌ ಬಾಬು ಟೀಕೆ

11:01 PM Aug 04, 2024 | Team Udayavani |

ಬೆಂಗಳೂರು: ಈ ಹಿಂದೆ ವಚನಭ್ರಷ್ಟತೆ ಆರೋಪ ಮಾಡಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೇ ಇಂದು ಬಿ.ಎಸ್‌. ಯಡಿಯೂರಪ್ಪ ಕೈಜೋಡಿಸಿ ಪಾದಯಾತ್ರೆ ಆರಂಭಿಸಿದ್ದಾರೆ.

Advertisement

ಈ ಮೂಲಕ ವರ್ತಮಾನದ ದುರಂತ ನಾಯಕರಾಗಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್‌ ಬಾಬು ಟೀಕಿಸಿದ್ದಾರೆ.

ಕುಮಾರಸ್ವಾಮಿಯಿಂದ ಅಧಿಕಾರ ವಂಚಿತ ರಾಗಿ ವಚನ ಭ್ರಷ್ಟತೆ ಆರೋಪ ಮಾಡಿ, ಇದೇ ಕಾರಣಕ್ಕೆ ಹೋರಾಟವನ್ನೂ ಮಾಡಿ ಬಿಎಸ್‌ವೈ ಅಧಿಕಾರಕ್ಕೆ ಬಂದರು. ಅನಂತರ ಬೇರೆ ಬೇರೆ ಸಂದರ್ಭಗಳಲ್ಲಿ ದೇವೇಗೌಡರ ಕುಟುಂಬದ ಮೇಲೆ ವಿಧಾನ ಮಂಡಲದ ಒಳಗಡೆ ಗಂಭೀರ ಆರೋಪಗಳನ್ನು ಮಾಡಿದರು. ಅವು ದಾಖಲೆ ಕೂಡ ಆಗಿವೆ. ಆದರೆ ಮಗನ ರಾಜಕೀಯ ಭವಿಷ್ಯಕ್ಕಾಗಿ ಅದೇ ಕುಮಾರಸ್ವಾಮಿ ಜತೆಗೆ ಕೈಜೋಡಿಸಿದ್ದಾರೆ.

ಯಡಿಯೂರಪ್ಪ 2008ರಲ್ಲಿ ಕುಮಾರಸ್ವಾಮಿ ವಿರುದ್ಧ ಮಾಡಿದ್ದ ವಚನ ಭ್ರಷ್ಟತೆ ಆರೋಪವನ್ನು ಈಗ ಹಿಂಪಡೆಯುತ್ತಾರಾ? 2011ರ ಮಾರ್ಚ್‌ 17ರಂದು ಮುಡಾದಲ್ಲಿ ದೇವೇಗೌಡ ಕುಟುಂಬ ಅಕ್ರಮವಾಗಿ 48 ನಿವೇಶನ ಪಡೆದಿರುವ ಆರೋಪವನ್ನು ವಾಪಸ್‌ ಪಡೆಯುತ್ತಾರಾ? ಅದೇ ದಿನ ಜಂತ್‌ಕಲ್‌ ಮೈನಿಂಗ್‌ ನವೀಕರಣದಲ್ಲಿ ದೇವೇಗೌಡರ ಕುಟುಂಬದವರು ಪಾಲುದಾರಿಕೆ ಪಡೆದಿದ್ದಾರೆ ಎಂದು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next