Advertisement

ಪರ್ಕಳ: ಆಸ್ತಿ ವಿಚಾರಕ್ಕೆ ನವವಿವಾಹಿತೆ ಮೇಲೆ ಸೋದರ ಮಾವನಿಂದ ಹಲ್ಲೆ!

12:03 PM Feb 10, 2022 | Team Udayavani |

ಉಡುಪಿ: ಆಸ್ತಿ ವಿಚಾರವಾಗಿ ನವವಿವಾಹಿತ ಮಹಿಳೆಗೆ ಸೋದರ ಮಾವನೇ ಕತ್ತಿಯಿಂದ ಕಡಿದು ಹಲ್ಲೆ ನಡೆಸಿರುವ ಘಟನೆ ಉಡುಪಿ ತಾಲೂಕಿನ ಪರ್ಕಳ ಹೆರ್ಗದ ಗರಡಿ ಬಳಿ ನಡೆದಿದೆ.

Advertisement

ದೀಪಾ ನಾಯಕ್ (28 ವರ್ಷ) ಅವರಿಗೆ ಸೋದರ ಮಾವ ಜಗದೀಶ್‌ ನಾಯಕ್‌ ಎಂಬಾತ ಹಲ್ಲೆ ನಡೆಸಿದ್ದಾನೆ.

ದೀಪಾ ಅವರ ಪತಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು.  ಬುಧವಾರ ಬೆಳಿಗ್ಗೆ 11.30 ರ ಸುಮಾರಿಗೆ ದೀಪಾ ನಾಯಕ್  ಅವರು ಮನೆಯ ಹೊರಗೆ ನಿಂತು ಪಕ್ಕದ ಮನೆಯವರು ನಡೆಸುತ್ತಿದ್ದ ಸರ್ವೆಯನ್ನು ನೋಡುತ್ತಿದ್ದಾಗ, ಆರೋಪಿ ಜಗದೀಶ್‌ ನಾಯಕ್‌ ಆಸ್ತಿ ವಿಚಾರದ ಪೂರ್ವ ದ್ವೇಷದಿಂದ ದೀಪಾ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು ಮಾತ್ರವಲ್ಲದೆ ತನ್ನ ಕೈಯಲ್ಲಿದ್ದ ಕತ್ತಿಯಿಂದ ತಲೆಯ ಹಿಂಬದಿಗೆ ಹೊಡೆದು ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ಪತ್ನಿ ಜತೆ ಅಕ್ರಮ ಸಂಬಂಧ: ಸ್ನೇಹಿತನ ಕೊಲೆ

ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next