Advertisement

Mangaluru ತಾಂತ್ರಿಕ ಸಮಿತಿಯಿಂದ ಸೇತುವೆ ಪರಿಶೀಲನೆ

12:20 AM Aug 20, 2024 | Team Udayavani |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಸಂಚಾರಕ್ಕೆ ಅಪಾಯ ಇರುವ ಸೇತುವೆಗಳ ಪರಿಶೀಲನೆಗೆ ತಾಂತ್ರಿಕ ತಜ್ಞರ ಸಮಿತಿ ಸೋಮವಾರ ಜಿಲ್ಲೆಗೆ ಆಗಮಿಸಿ ಪರಿಶೀಲನೆ ನಡೆಸಿದೆ.

Advertisement

ಪೊಳಲಿ, ಉಳಾಯಿಬೆಟ್ಟು ಮತ್ತು ಬಳ್ಕುಂಜೆಗೆ ಭೇಟಿ ನೀಡಿದ ತಾಂತ್ರಿಕ ತಜ್ಞರು, ಅಲ್ಲಿನ ಸೇತುವೆಗಳನ್ನು ವೀಕ್ಷಿಸಿದರು. ದೋಣಿಯಲ್ಲಿ ತೆರಳಿ ಸೇತುವೆಯ ತಳಭಾಗಕ್ಕೂ ಭೇಟಿ ನೀಡಿ ವೀಕ್ಷಿಸಿದರು. ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.

ನಿವೃತ್ತ ಮುಖ್ಯ ಎಂಜಿನಿಯರ್‌ ಮತ್ತು ಸೇತುವೆ ತಜ್ಞ ಜೈಗೋಪಾಲ್‌, ಯೋಜನೆ ಮತ್ತು ರಸ್ತೆ ಆಸ್ತಿ ವ್ಯವಹಾರ ನಿರ್ವಹಣೆ ಕೇಂದ್ರ ಬೆಂಗಳೂರು ಇದರ ಹಿರಿಯ ಅಧಿಕಾರಿ ಮಹೇಂದ್ರ ಸಮಿತಿಯಲ್ಲಿದ್ದರು. ಮಂಗಳೂರು ವಿಭಾಗ ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಅಭಿಯಂತ ಅಮರನಾಥ ಜೈನ್‌, ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜು ಆರ್‌. ಬಿ. ಮತ್ತಿತರರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next