Advertisement

ಬ್ರಿಜ್‌ ಕಂ ಬ್ಯಾರೇಜ್‌ ಕಾಮಗಾರಿಗೆ ಚಾಲನೆ

05:42 PM Aug 31, 2020 | Suhan S |

ನಾರಾಯಣಪುರ: ಹುಣಸಗಿ ತಾಲೂಕಿನ ಯರಿಕ್ಯಾಳ ಗ್ರಾಮದ ಬಳಿಯ ಹಳ್ಳಕ್ಕೆ ಬ್ರಿಜ್‌ ಕಂ ಬ್ಯಾರೇಜ್‌ ಕಾಮಗಾರಿಗೆ ಶಾಸಕ ರಾಜುಗೌಡ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

Advertisement

ನಂತರ ಮಾತನಾಡಿದ ಶಾಸಕರು, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆದಿವೆ. ಕೃಷ್ಣಾ ಭಾಗ್ಯ ಜಲ ನಿಗಮದ ಅಡಿಯಲ್ಲಿ ಈ ಬಾರಿ ಸಿಸಿ ರಸ್ತೆ, ಕಾಲುವೆ ಜಾಲದ ರಸ್ತೆ, ಕಾಲುವೆಗಳ ದುರಸ್ತಿ, ಗೇಟ್‌ ಅಳವಡಿಕೆ ಸೇರಿದಂತೆ ಇತರ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ. ಯರಿಕ್ಯಾಳ ಗ್ರಾಮಕ್ಕೆ ಹಲವಾರು ವರ್ಷಗಳಿಂದಲೂ ರಸ್ತೆ ಸಮಸ್ಯೆ ಇತ್ತು. ಗ್ರಾಮಸ್ಥರಿಗೆ ರಸ್ತೆ ಮತ್ತು ನೀರಾವರಿ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದಡಿ ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ ಬ್ರಿಜ್‌ಕಂ ಬ್ಯಾರೇಜ್‌ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಕಾಮಗಾರಿಯಿಂದ ಯರಿಕ್ಯಾಳ, ಯರಿಕ್ಯಾಳ ತಾಂಡಾ, ಕುರೇಕನಾಳ ಗ್ರಾಮದ ಸುಮಾರು ನೂರಾರು ಎಕರೆ ಪ್ರದೇಶ ನೀರಾವರಿಗೆ ಒಳಪಡಲಿದೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಯಲ್ಲಪ್ಪಕುರಕುಂದಿ, ಮಾಜಿ ಸದಸ್ಯ ಎಚ್‌ .ಸಿ.ಪಾಟೀಲ, ಡಾ| ಬಸನಗೌಡ ಅಳ್ಳಿಕೋಟಿ, ಬಿ.ಎನ್‌. ಪೊಲೀಸ್‌ಪಾಟೀಲ, ಮಲ್ಲು ನವಲಗುಡ್ಡ, ದೇವು ಗೋಪಾಳೆ, ಕನಕು ಜೀರಾಳ, ಶಾಮಸುಂದರ ಜೋಶಿ, ವೀರಸಂಗಪ್ಪ ಹಾವೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next