Advertisement

ಲಂಚ ಸ್ವೀಕಾರ:ಮಂಗಳೂರು ಜೈಲರ್‌ಗೆ ಶಿಕ್ಷೆ  

11:45 AM Feb 09, 2018 | Team Udayavani |

ಮಂಗಳೂರು: ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ 2011ರಲ್ಲಿ ಅಸೌಖ್ಯದಿಂದಿದ್ದ ಕೈದಿಯನ್ನು ಆಸ್ಪತ್ರೆಗೆ ದಾಖಲಿಸಲು ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ  ಜೈಲರ್‌ (ಈಗ ನಿವೃತ್ತ) ಕೆ.ಬಿ. ತಿಪ್ಪಾ ನಾಯ್ಕ ಅವರಿಗೆ ಮಂಗಳೂರು ಲೋಕಾಯುಕ್ತ ನ್ಯಾಯಾಲಯವು 1 ವರ್ಷ ಸಾದಾ ಸಜೆ ಹಾಗೂ 3 ಸಾವಿರ ರೂ. ದಂಡ ವಿಧಿಸಿದೆ. 

Advertisement

2011 ಜ.3ರಂದು ಅಸ್ವಸ್ಥ ವಿಚಾರಣಾಧೀನ ಕೈದಿಯನ್ನು ಆಸ್ಪತ್ರೆಗೆ ದಾಖಲಿಸಲು ಕಾರಾಗೃಹದ ಪ್ರಭಾರ ಉಪ ಅಧೀಕ್ಷಕರಾಗಿದ್ದ  ಕೆ.ಬಿ. ತಿಪ್ಪಾ ನಾಯ್ಕ ಅವರು ಪ್ರಮೋದ್‌ ಆಳ್ವ  ಅವರಿಂದ  1,000 ರೂ. ಲಂಚಕ್ಕೆ ಬೇಡಿಕೆ ಮಂಡಿಸಿದ್ದರು ಎಂದು ಆರೋಪಿಸಲಾಗಿತ್ತು. ಲೋಕಾಯುಕ್ತ ಪೊಲೀಸರು ಆರೋಪಿಯನ್ನು ತಮ್ಮ ಬಲೆಗೆ ಕೆಡಹಲು ವ್ಯೂಹ ರಚಿಸಿದ್ದರು. ಅದರ ಪ್ರಕಾರ ಆಗಿನ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ದಿಲೀಪ್‌ ಕುಮಾರ್‌  ನೇತೃತ್ವದಲ್ಲಿ  ಲಂಚ ಸ್ವೀಕರಿಸುತ್ತಿದ್ದಾಗಲೇ ಬಂಧಿಸಲಾಗಿತ್ತು. 

ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಮಂಗಳೂರಿನ 3ನೇ ಜಿಲ್ಲಾ ಮತ್ತು ಸೆಷನ್ಸ್‌ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಮುರಳೀಧರ ಪೈ ಗುರುವಾರ ಶಿಕ್ಷೆ ವಿಧಿಸಿದರು. ಲೋಕಾಯುಕ್ತ ಪರವಾಗಿ ವಿಶೇಷ ಅಭಿಯೋಜಕ ಕೆ.ಎಸ್‌.ಎನ್‌. ರಾಜೇಶ್‌  ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next