Advertisement

ಅಕ್ರಮ ಮರಳು ದಂಧೆ ವಿರುದ್ಧ ಬೊಬ್ಬೆ ಚಳವಳಿ

11:07 AM Feb 23, 2018 | |

ಕಲಬುರಗಿ: ತಾಲೂಕಿನ ಫಿರೋಜಾಬಾದ್‌ ಗ್ರಾಮದ ಬಳಿ ಇರುವ ಭೀಮಾ ನದಿಯಲ್ಲಿ ಅಕ್ರಮ ಮರಳು ಸಾಗಣೆ ತಡೆಯಲು ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆರೋಪಿಸಿ ಫಿರೋಜಾಬಾದ್‌ ಗ್ರಾಮಸ್ಥರು ನಗರದಲ್ಲಿ ಗುರುವಾರ ಬೊಬ್ಬೆ ಚಳವಳಿ ನಡೆಸಿದರು.

Advertisement

ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಪ್ರತಿಭಟನೆಕಾರರು, ಅಕ್ರಮ ಮರಳು ಸಾಗಣೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಭೀಮಾ ನದಿಯಲ್ಲಿ ಮರಳು ಸಾಗಿಸಲು ಅಡ್ಡಲಾಗಿ ಅನಧಿಕೃವಾಗಿ ನಿರ್ಮಿಸಲಾಗಿರುವ ರಸ್ತೆ ತೆರವುಗೊಳಿಬೇಕು. ಭೂಮಿ ಕೊಚ್ಚಿಕೊಂಡು ಹೋಗದಿರಲು ಹಾಗೂ ಜೀವ ಜಲ ರಕ್ಷಿಸಲು ಅಕ್ರಮ ಮರಳು ಸಾಗಣೆ ತಡೆಯಬೇಕು ಎಂದು ಒತ್ತಾಯಿಸಿದರು.

ಅಕ್ರಮ ಮರಳು ಸಾಗಣೆಯಿಂದ ಈಗಾಗಲೇ ಗ್ರಾಮಸ್ಥರು ಹಲವಾರು ತೊಂದರೆಗಳನ್ನು ಎದಿರುಸುತ್ತಿದ್ದಾರೆ. ಜನ ಹಾಗೂ ಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆ ಬಂದಾಗ ಪ್ರವಾಹ ಉಂಟಾಗಿ ಭೂಮಿ ಕೊಚ್ಚಿಕೊಂಡು ಹೋಗಿ ಬೆಳೆ ನಾಶವಾಗಿದೆ. ಆದ್ದರಿಂದ ಕೂಡಲೇ ಅಕ್ರಮ ಮರಳು ಸಾಗಣೆ ಸಂಪೂರ್ಣವಾಗಿ ತಡೆಯುವಂತೆ ಅವರು ಆಗ್ರಹಿಸಿದರು. ಗ್ರಾಮದ ಗಣ್ಯ ಅಬ್ದುಲ್‌ ಲತೀಫ್‌ ಎಸ್‌.ಎಂ. ಜಾಗೀರದಾರ ಅವರ ನೇತೃತ್ವದಲ್ಲಿ ನಗರದ ತಹಶೀಲ್ದಾರ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ನಡೆದ ಬೊಬ್ಬೆ ಚಳವಳಿಯಲ್ಲಿ ಮಹಿಳೆಯರು ಹಾಗೂ ಮಕ್ಕಳೂ ಸಹ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next