Advertisement

Brahmavara: ಅ.14 ಮತ್ತು 15ರಂದು ಚೇರ್ಕಾಡಿಯಲ್ಲಿ ಕೃಷಿ, ಆಹಾರ, ಸಸ್ಯ ಮೇಳ

12:51 AM Oct 14, 2023 | Team Udayavani |

ಬ್ರಹ್ಮಾವರ: ಚೇರ್ಕಾಡಿ ಮುಂಡ್ಕಿನಜೆಡ್ಡು ಶ್ರೀ ಜ್ಞಾನಶಕ್ತಿ ಕ್ರೀಡಾ ಮತ್ತು ಕಲಾ ಸಂಘ, ರೋಟರಿ ರೋಯಲ್‌ ಬ್ರಹ್ಮಾವರ, ಬ್ರಹ್ಮಾವರ-ಬಾರಕೂರು ಲಯನ್ಸ್‌ ಕ್ಲಬ್‌, ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕಾ ಇಲಾಖೆಯ ಆಶ್ರಯದಲ್ಲಿ ಕೃಷಿ, ಆಹಾರ, ಸಸ್ಯ ಮೇಳ ಹಾಗೂ ಉದ್ಯೋಗ ಮಾಹಿತಿ ಶಿಬಿರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಅ.14 ಮತ್ತು 15ರಂದು ಬೆಳಗ್ಗೆ 9ರಿಂದ ರಾತ್ರಿ 8ರ ವರೆಗೆ ಮುಂಡ್ಕಿನಜೆಡ್ಡು ಆರ್‌.ಕೆ. ಪಾಟ್ಕರ್‌ ಶಾಲಾ ಮೈದಾನದಲ್ಲಿ ನಡೆಯಲಿದೆ.

Advertisement

ಕಾರ್ಯಕ್ರಮವನ್ನು ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ವಸ್ತು ಪ್ರದರ್ಶನವನ್ನು ಕೃಷಿ ಸಚಿವ ಚೆಲುವರಾಯಸ್ವಾಮಿ ಉದ್ಘಾಟಿಸಲಿದ್ದು, ಮೇಳದ ಸಂಚಾಲಕ ಉದಯ್‌ ಕುಮಾರ್‌ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಅತಿಥಿ ಗಣ್ಯರು ಪಾಲ್ಗೊಳ್ಳುವರು.

ತಾಂತ್ರಿಕ ಸಮಾವೇಶ
ಅ.14ರಂದು ಬೆಳಗ್ಗೆ ಮಳೆ ನೀರಿನ ಕೊಯ್ಲು ಮತ್ತು ನೀರು ಸಂರಕ್ಷಣೆ, ಮಧ್ಯಾಹ್ನ ತೋಟಗಾರಿಕೆ ಬೆಳೆಗಳ ವಿಚಾರ ಸಂಕಿರಣ, ಅ.15ರಂದು ಬೆಳಗ್ಗೆ ಸಮಗ್ರ ಕೃಷಿ ಪದ್ದತಿಗಳು, ಮಧ್ಯಾಹ್ನ ಕೃಷಿ ಉದ್ಯೋಗಾವಕಾಶಗಳ ಕುರಿತು ತಾಂತ್ರಿಕ ಸಮಾವೇಶ ನಡೆಯಲಿದೆ. ಪ್ರಗತಿಪರ ರೈತರು, ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿರುವರು. ಕೃಷಿ ಹಾಗೂ ಆಹಾರಕ್ಕೆ ಸಂಬಂಧಿಸಿ ವಿವಿಧ ಮಳಿಗೆಗಳು ಇರಲಿವೆ.

Advertisement

Udayavani is now on Telegram. Click here to join our channel and stay updated with the latest news.

Next