Advertisement
ಮಧ್ಯಾಹ್ನ 3.50 ಕ್ಕೆ ಸರಿಯಾಗಿ ರಥೋತ್ಸವಕ್ಕೆ ಕಳಸ ಶಂಕುಸ್ಥಾಪನೆಯನ್ನು ದೇವಾಲಯದ ಆರ್ಚಕರು ನೆರವೇರಿಸಿದರು. ನಂತರ ಮಧ್ಯಾಹ್ನ 4.30ಕ್ಕೆ ಗ್ರಾಮದ ಎಲ್ಲಾ ಸಮುದಾಯದ ಮುಖಂಡರು ದೇವಸ್ಥಾನದ ಆವರಣದಲ್ಲಿ ಜಮಾಯಿಸಿ ಹಸಿರುತಳಿರು ತೋರಣ, ಬೃಹದಾಕಾರದ ಹೂವಿನ ಹಾರಗಳಿಂದ ಅಲಂಕೃತವಾಗಿ ಸಿಂಗಾರಗೊಂಡಿದ್ದ
Related Articles
Advertisement
ಈ ಸಂದರ್ಭದಲ್ಲಿ ತಾಪಂ ಸದಸ್ಯ ಎಂ.ಚಂದ್ರಶೇಖರ್, ಪಾರುಪತ್ತೇಗಾರ್ ಎಂ.ಬಿ.ಸಾಗರ್, ಮುಖಂಡರಾದ ಎಂ.ಡಿ.ಬಸವರಾಜು, ಎಂ.ಆರ್.ಸುಂದರ್, ಗ್ರಾಪಂ ಉಪಾಧ್ಯಕ್ಷ ಎಂ.ಬಿ. ರಮೇಶ್, ತಾಲೂಕು ಬಾಬು ಜಗಜೀವನರಾಂ ಸಂಘದ ತಾಲೂಕು ಅಧ್ಯಕ್ಷ ಸಿದ್ದರಾಜು, ಎಂ.ಆರ್.ಶಿವಮೂರ್ತಿ, ನಂಜುಂಡಸ್ವಾಮಿ,
ಜಿಲ್ಲಾ ಜೆಡಿಎಸ್ ಮಾಜಿ ಉಪಾಧ್ಯಕ್ಷ ಎಂ.ಕೆ.ಸಿದ್ದರಾಜು, ಗೌ.ನಾಗರಾಜು, ಎಂ.ಎಂ ಜಗದೀಶ್, ಡೈರಿ ನಾಗೇಂದ್ರ, ಯಜಮಾನ್ ಪುಟ್ಟಮಾದಯ್ಯ, ಪಿಡಿಒ ನಾಗೇಂದ್ರ, ನಿಂಗಪ್ಪ, ಜಯಣ್ಣ, ಮರಿಸ್ವಾಮಿ, ರೇವಣ್ಣ, ಉಪನ್ಯಾಸಕ ಕುಮಾರಸ್ವಾಮಿ, ರಮೇಶ್ನಾಯ್ಕ, ಮಹದೇವನಾಯ್ಕ ಇತರರು ಇದ್ದರು.
ಸಾಲುಗಟ್ಟದ ಭಕ್ತರು: ಗ್ರಾಮದಲ್ಲಿ ಬೆಳಗ್ಗೆಯಿಂದಲೇ ಅಲ್ಲಲ್ಲಿ ಹರಕೆ ಹೊತ್ತ ಭಕ್ತರು ನೆರೆದಿದ್ದ ಭಕ್ತರಿಗೆ ಮೊಸರನ್ನ, ಬಾತ್ ಹಾಗೂ ಪಾನಕ, ಮಜ್ಜಿಗೆ, ಕೊಸಂಬರಿ ವಿತರಣೆ ಮಾಡಿದರು. ಬೆಳಗ್ಗಿನ 6 ಗಂಟೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ದೇವಸ್ಥಾನದ ಪ್ರಾಂಗಣದಿಂದ ಮುಖ್ಯ ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತು ಅಮ್ಮನವರ ದರ್ಶನ ಪಡೆದುಕೊಂಡರು.
ಧಾರ್ಮಿಕ ವಿಧಿವಿಧಾನದಂತೆ ಅಮ್ಮನವರಿಗೆ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಮೂಗೂರು ಗೆಳೆಯರ ಬಳಗದ ವತಿಯಿಂದ ರಥೋತ್ಸವಕ್ಕೆ ಬೃಹತ್ ಹೂವಿನ ಹಾರವನ್ನು ಅರ್ಪಿಸಿ ನೆರೆದಿದ್ದ ಭಕ್ತರಿಗೆ ಸಿಹಿಹಂಚಲಾಯಿತು.