Advertisement

ತ್ರಿಪುರ ಸುಂದರಿ ಅಮ್ಮನವರ ಬ್ರಹ್ಮ ರಥೋತ್ಸವ

12:27 PM Jan 04, 2018 | |

ಮೂಗೂರು/ತಿ.ನರಸೀಪುರ: ತಾಲೂಕಿನ ಮೂಗೂರು ಗ್ರಾಮದಲ್ಲಿ ಬುಧವಾರ ಶ್ರೀ ತ್ರಿಪುರ ಸುಂದರಿ ಅಮ್ಮನವರ  ಮಹಾಬ್ರಹ್ಮ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ, ಭಾವ ಸಡಗರದೊಂದಿಗೆ ಬಹಳ ವಿಜೃಂಭಣೆಯಿಂದ ಜರುಗಿತು.

Advertisement

ಮಧ್ಯಾಹ್ನ 3.50 ಕ್ಕೆ ಸರಿಯಾಗಿ ರಥೋತ್ಸವಕ್ಕೆ ಕಳಸ ಶಂಕುಸ್ಥಾಪನೆಯನ್ನು ದೇವಾಲಯದ ಆರ್ಚಕರು  ನೆರವೇರಿಸಿದರು. ನಂತರ ಮಧ್ಯಾಹ್ನ 4.30ಕ್ಕೆ ಗ್ರಾಮದ ಎಲ್ಲಾ ಸಮುದಾಯದ ಮುಖಂಡರು ದೇವಸ್ಥಾನದ ಆವರಣದಲ್ಲಿ ಜಮಾಯಿಸಿ ಹಸಿರುತಳಿರು ತೋರಣ, ಬೃಹದಾಕಾರದ ಹೂವಿನ ಹಾರಗಳಿಂದ ಅಲಂಕೃತವಾಗಿ ಸಿಂಗಾರಗೊಂಡಿದ್ದ

ಶ್ರೀ ತ್ರಿಪುರ ಸುಂದರಿ ಅಮ್ಮನವರ ಬ್ರಹ್ಮರಥೋತ್ಸವಕ್ಕೆ ಮಹಾಮಂಗಳಾರತಿ ನೆರವೇರಿಸುವ ಮೂಲಕ ವಾಟಾಳು ಶ್ರೀ ಸಿದ್ಧಲಿಂಗಶಿವಚಾರ್ಯಸ್ವಾಮಿಜೀ ಹಾಗೂ ತಹಶೀಲ್ದಾರ್‌ ಬಸವರಾಜ್‌ ಚಿಗರಿ ಚಾಲನೆ ನೀಡಿದರು. ಕಾಂಕ್ರೀಟ್‌ ರಸ್ತೆ ನಿರ್ಮಾಣದಿಂದಾಗಿ ರಥವು ಯಾವುದೇ ಅಡೆತಡೆಗಳಿಲ್ಲದೇ ಸುಗಮವಾಗಿ ರಥದ ಬೀದಿ, ಅಂಗಡಿ ಬೀದಿ, ಮತ್ತು ಬಂಡಿ ಬೀದಿ ಮೂಲಕ ಸ್ವಸ್ಥಾನ ತಲುಪಿತು.

ಇಷ್ಟಾರ್ಥ ಸಿದ್ಧಿ ಪ್ರಾರ್ಥನೆ: ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು, ರಾಮನಗರ, ಕನಕಪುರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ರಥೋತ್ಸವಕ್ಕೆ ಆಗಮಿಸಿದ್ದ ಸಹಸ್ರಾರು ಭಕ್ತರು ಹಣ್ಣುದವನ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರೆ, ಯುವ ಸಮೂಹ ಉತ್ಸಾಹದಿಂದ ತ್ರಿಪುರ ಸುಂದರಿ ಅಮ್ಮನವರಿಗೆ ಜೈಕಾರ ಕೂಗುತ್ತ ಪರಸ್ಪರ ಬಣ್ಣ ಎರಚಿಕೊಂಡು ತೇರನ್ನು ಎಳೆದು ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಿಸಿದರು.

ಹೆಚ್ಚಾಗಿ ನವ ದಂಪತಿಗಳು ಆಗಮಿಸಿ ರಥೋತ್ಸವದಲ್ಲಿ ಭಾಗವಹಿಸಿ ಹಣ್ಣು ದವನ ಎಸೆದು ಭಕ್ತಿ ಪರಕಾಷ್ಟೆ ಮೆರೆದರು. ಸರ್ಕಲ್‌ಇನ್ಸ್‌ಪೆಕ್ಟರ್‌ ಮನೋಜ್‌ಕುಮಾರ್‌ ನೇತೃತ್ವದಲ್ಲಿ ತಿ.ನರಸೀಪುರ ಪಿಎಸ್‌ಐ ಎನ್‌.ಆನಂದ್‌, ಲತೇಶ್‌ಕುಮಾರ್‌, ನಂದೀಶ್‌ಕುಮಾರ್‌, ಮಂಚಿಗಯ್ಯ, ಇಮ್ರಾನ್‌ ಅಹಮ್ಮದ್‌  ಸೇರಿದಂತೆ 100 ಕ್ಕೂ ಹೆಚ್ಚು ಪೋಲಿಸ್‌ ಸಿಬ್ಬಂದಿ ಬಿಗಿಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.

Advertisement

ಈ ಸಂದರ್ಭದಲ್ಲಿ ತಾಪಂ ಸದಸ್ಯ ಎಂ.ಚಂದ್ರಶೇಖರ್‌, ಪಾರುಪತ್ತೇಗಾರ್‌ ಎಂ.ಬಿ.ಸಾಗರ್‌, ಮುಖಂಡರಾದ ಎಂ.ಡಿ.ಬಸವರಾಜು, ಎಂ.ಆರ್‌.ಸುಂದರ್‌, ಗ್ರಾಪಂ ಉಪಾಧ್ಯಕ್ಷ ಎಂ.ಬಿ. ರಮೇಶ್‌, ತಾಲೂಕು ಬಾಬು ಜಗಜೀವನರಾಂ ಸಂಘದ ತಾಲೂಕು ಅಧ್ಯಕ್ಷ ಸಿದ್ದರಾಜು, ಎಂ.ಆರ್‌.ಶಿವಮೂರ್ತಿ, ನಂಜುಂಡಸ್ವಾಮಿ,

ಜಿಲ್ಲಾ ಜೆಡಿಎಸ್‌ ಮಾಜಿ ಉಪಾಧ್ಯಕ್ಷ ಎಂ.ಕೆ.ಸಿದ್ದರಾಜು, ಗೌ.ನಾಗರಾಜು, ಎಂ.ಎಂ ಜಗದೀಶ್‌, ಡೈರಿ ನಾಗೇಂದ್ರ, ಯಜಮಾನ್‌ ಪುಟ್ಟಮಾದಯ್ಯ, ಪಿಡಿಒ ನಾಗೇಂದ್ರ, ನಿಂಗಪ್ಪ, ಜಯಣ್ಣ,  ಮರಿಸ್ವಾಮಿ, ರೇವಣ್ಣ, ಉಪನ್ಯಾಸಕ ಕುಮಾರಸ್ವಾಮಿ, ರಮೇಶ್‌ನಾಯ್ಕ, ಮಹದೇವನಾಯ್ಕ ಇತರರು ಇದ್ದರು.

ಸಾಲುಗಟ್ಟದ ಭಕ್ತರು: ಗ್ರಾಮದಲ್ಲಿ ಬೆಳಗ್ಗೆಯಿಂದಲೇ ಅಲ್ಲಲ್ಲಿ ಹರಕೆ ಹೊತ್ತ ಭಕ್ತರು ನೆರೆದಿದ್ದ ಭಕ್ತರಿಗೆ ಮೊಸರನ್ನ, ಬಾತ್‌ ಹಾಗೂ ಪಾನಕ, ಮಜ್ಜಿಗೆ, ಕೊಸಂಬರಿ ವಿತರಣೆ ಮಾಡಿದರು. ಬೆಳಗ್ಗಿನ 6 ಗಂಟೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ದೇವಸ್ಥಾನದ ಪ್ರಾಂಗಣದಿಂದ ಮುಖ್ಯ ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತು ಅಮ್ಮನವರ ದರ್ಶನ ಪಡೆದುಕೊಂಡರು.

ಧಾರ್ಮಿಕ ವಿಧಿವಿಧಾನದಂತೆ ಅಮ್ಮನವರಿಗೆ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಮೂಗೂರು ಗೆಳೆಯರ ಬಳಗದ ವತಿಯಿಂದ ರಥೋತ್ಸವಕ್ಕೆ ಬೃಹತ್‌ ಹೂವಿನ ಹಾರವನ್ನು ಅರ್ಪಿಸಿ ನೆರೆದಿದ್ದ ಭಕ್ತರಿಗೆ ಸಿಹಿಹಂಚಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next