Advertisement

ಮುಂದಿನ ವರ್ಷದ ಮೊದಲ ಚಿತ್ರ “ಬೃಹಸ್ಪತಿ’

02:27 PM Dec 17, 2017 | |

ರವಿಚಂದ್ರನ್‌ ಅವರ ಮಗ ಮನೋರಂಜನ್‌ ಅಭಿನಯದ ಎರಡನೆಯ ಚಿತ್ರವಾದ “ಬೃಹಸ್ಪತಿ’ಯ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿದೆ. ಜಗ್ಗೇಶ್‌, ಮುನಿರತ್ನ, ಸಾಧು ಕೋಕಿಲ, ಅವಿನಾಶ್‌ ಸೇರಿದಂತೆ ಹಲವು ಕಲಾವಿದರು ಮತ್ತು ತಂತ್ರಜ್ಞರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆಡಿಯೋ ಬಿಡುಗಡೆಯ ನಂತರ ಚಿತ್ರತಂಡದವರು, ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದು, ಜನವರಿ 5ರಂದು ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಅಲ್ಲಿಗೆ, ರವಿಚಂದ್ರನ್‌ ಅವರ ಮಗನ ಸಿನಿಮಾ, 2018ರ ಮೊದಲ ಕನ್ನಡ ಚಿತ್ರವಾಗಿ ಬಿಡುಗಡೆಯಾಗಲಿದೆ.

Advertisement

ತಮಿಳಿನ “ವಿಐಪಿ’ ಚಿತ್ರದ ರೀಮೇಕ್‌ ಆಗಿರುವ “ಬೃಹಸ್ಪತಿ’ಗೆ ಇದಕ್ಕೂ ಮುನ್ನ ಈ ಚಿತ್ರಕ್ಕೆ “ವಿಐಪಿ’ ಎಂದೇ ನಾಮಕರಣ ಮಾಡಲಾಗಿತ್ತು. ಆ ನಂತರ ಚಿತ್ರತಂಡದವರೆಲ್ಲಾ ಇನ್ನೊಮ್ಮೆ ಚರ್ಚಿಸಿ, ಹೆಸರು ಬದಲಾಯಿಸಿದರು. ಆಗ “ವಿಐಪಿ’ ಬದಲು “ಸನ್‌ ಆಫ್ ರವಿಚಂದ್ರನ್‌’ ಎಂದು ನಾಮಕರಣ ಮಾಡಲಾಯಿತು. ಈಗ ಮತ್ತೆ ಚಿತ್ರತಂಡದವರು ಚಿತ್ರದ ಹೆಸರನ್ನು “ಬೃಹಸ್ಪತಿ’ ಎಂದು ಬದಲಾಯಿಸಿದ್ದು, ಇದೇ ಹೆಸರು ಫೈನಲ್‌ ಆಗಲಿದೆ.

ಅಂದ ಹಾಗೆ, “ಬೃಹಸ್ಪತಿ’ ಚಿತ್ರವನ್ನು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸಿದ್ದು, ನಂದಕಿಶೋರ್‌ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಸತ್ಯ ಹೆಗಡೆ ಅವರ ಛಾಯಾಗ್ರಹಣ ಮತ್ತಿ ವಿ. ಹರಿಕೃಷ್ಣ ಅವರ ಸಂಗೀತವಿದೆ. ಮನೋರಂಜನ್‌ ಎದುರು ಮಿಶಿ¤ ಚಕ್ರವರ್ತಿ ನಾಯಕಿಯಾಗಿ ನಟಿಸಿದ್ದು, ಮಿಕ್ಕಂತೆ ಸಿತಾರಾ, ಅವಿನಾಶ್‌, ಸಾಧು ಕೋಕಿಲ, ಪ್ರಕಾಶ್‌ ಬೆಳವಾಡಿ ಮುಂತಾದವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next