Advertisement

ಬ್ರೆಬೋರ್ನ್: 1995ರ ಬಳಿಕ ಭಾರತದ ಆಟ!

10:38 AM Oct 29, 2018 | |

“ಕ್ರಿಕೆಟ್‌ ಕ್ಲಬ್‌ ಆಫ್ ಇಂಡಿಯಾ’ (ಸಿಸಿಐ) ಒಡೆತನದ “ಬ್ರೆಬೋರ್ನ್ ಸ್ಟೇಡಿಯಂ’ನಲ್ಲಿ ಈವರೆಗೆ 8 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ನಡೆದರೂ ಇದರಲ್ಲಿ ಭಾರತ ಆಡಿದ್ದು ಒಂದರಲ್ಲಿ ಮಾತ್ರ. ಅದೂ 1995ರಷ್ಟು ಹಿಂದೆ!

Advertisement

ಭಾರತಕ್ಕೆ ಹೋಲಿಸಿದರೆ ವೆಸ್ಟ್‌ ಇಂಡೀಸೇ ವಾಸಿ. ಅದು ಇಲ್ಲಿ 4 ಏಕದಿನ ಪಂದ್ಯಗಳನ್ನಾಡಿದೆ. ಒಂದರಲ್ಲಿ ಗೆದ್ದು ಮೂರರಲ್ಲಿ ಸೋತಿದೆ. ಭಾರತ-ವೆಸ್ಟ್‌ ಇಂಡೀಸ್‌ ಇಲ್ಲಿ ಮುಖಾ ಮುಖೀಯಾಗುತ್ತಿರುವುದು ಇದೇ ಮೊದಲು.
1995ರಲ್ಲಿ ಭಾರತ ತನ್ನ ಏಕೈಕ ಪಂದ್ಯವನ್ನು ಈ ಅಂಗಳದಲ್ಲಿ ಆಡಿತ್ತು. ಎದುರಾಳಿ ನ್ಯೂಜಿಲ್ಯಾಂಡ್‌. ಅದು ಸರಣಿಯ 6ನೇ ಹಾಗೂ ಅಂತಿಮ ಪಂದ್ಯವಾಗಿತ್ತು. ಮೊಹಮ್ಮದ್‌ ಅಜರುದ್ದೀನ್‌ ಮತ್ತು ಲೀ ಜರ್ಮನ್‌ ಇತ್ತಂಡಗಳ ನಾಯಕರಾಗಿದ್ದರು. ಸಣ್ಣ ಮೊತ್ತದ ಈ ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಜಯಿಸಿತ್ತು.

ಅನಿಲ್‌ ಕುಂಬ್ಳೆ (17ಕ್ಕೆ 3), ಜಾವಗಲ್‌ ಶ್ರೀನಾಥ್‌ (22ಕ್ಕೆ 2), ಆಶಿಷ್‌ ಕಪೂರ್‌ (33ಕ್ಕೆ 2) ದಾಳಿಗೆ ತತ್ತರಿಸಿದ ನ್ಯೂಜಿಲ್ಯಾಂಡ್‌ 35 ಓವರ್‌ಗಳಲ್ಲಿ 126ಕ್ಕೆ ಕುಸಿದಿತ್ತು. ಭಾರತ 32 ಓವರ್‌ಗಳಲ್ಲಿ 4 ವಿಕೆಟಿಗೆ 128 ರನ್‌ ಬಾರಿಸಿ ಸರಣಿಯನ್ನು 3-2 ಅಂತರದಿಂದ ವಶಪಡಿಸಿಕೊಂಡಿತ್ತು. ವಿನೋದ್‌ ಕಾಂಬ್ಳಿ ಸರ್ವಾಧಿಕ 48, ಅಜಯ್‌ ಜಡೇಜ ಅಜೇಯ 35, ಆರಂಭಿಕನಾಗಿ ಇಳಿದಿದ್ದ ಮನೋಜ್‌ ಪ್ರಭಾಕರ್‌ ಔಟಾಗದೆ 32 ರನ್‌ ಮಾಡಿದರು. ತೆಂಡುಲ್ಕರ್‌ (1), ಅಜರ್‌ (4), ಮಾಂಜ್ರೆàಕರ್‌ (0) ವಿಫ‌ಲರಾಗಿದ್ದರು.

 ಈ ಪಂದ್ಯದ ಬಳಿಕ ಮತ್ತೆ ಬ್ರೆಬೋರ್ನ್ನಲ್ಲಿ ಏಕದಿನ ಪಂದ್ಯ ನಡೆದದ್ದು ಭರ್ತಿ 11 ವರ್ಷಗಳ ಬಳಿಕ, 2006ರಲ್ಲಿ. ಅಂದಿನ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಸರಣಿಯ 5 ಪಂದ್ಯಗಳು ಇಲ್ಲಿ ಏರ್ಪಟ್ಟಿದ್ದವು. ಅನಂತರ “ಬ್ರೆಬೋರ್ನ್’ನಲ್ಲಿ ನಡೆದ ಅಂತಾರಾಷ್ಟ್ರೀಯ ಪಂದ್ಯವೆಂದರೆ 2009ರ ಭಾರತ-ಶ್ರೀಲಂಕಾ ಟೆಸ್ಟ್‌ ಪಂದ್ಯ.  ಒಂದು ದಶಕದ ಬಳಿಕ ಬ್ರೆಬೋರ್ನ್ ಅಂತಾರಾಷ್ಟ್ರೀಯ ಪಂದ್ಯ ವೊಂದರ ಆತಿಥ್ಯ ವಹಿಸುವ ಸಡಗರದಲ್ಲಿದೆ.

ಬ್ರೆಬೋರ್ನ್ನಲ್ಲೂ  ಮೊಳಗಲಿದೆ ಗಂಟೆ


2006ರ ಬಳಿಕ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ಆತಿಥ್ಯ ವಹಿಸುವ ಖುಷಿಯಲ್ಲಿರುವ ಮುಂಬಯಿಯ “ಬ್ರೆಬೋರ್ನ್ ಸ್ಟೇಡಿಯಂ’ ಇದನ್ನು ವಿಶೇಷ ರೀತಿಯಲ್ಲಿ ಆಚರಿಸಲಿದೆ.  ಐತಿಹಾಸಿಕ ಲಾರ್ಡ್ಸ್‌ ಹಾಗೂ ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಂತೆ ಅಂತಾರಾಷ್ಟ್ರೀಯ ಪಂದ್ಯದ ಆರಂಭಕ್ಕೂ ಮುನ್ನ ಗಂಟೆ ಬಾರಿಸುವ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ. 

Advertisement

ಮೊದಲ ಅವಕಾಶ ಮಾಸ್ಟರ್‌ ಬ್ಲಾಸ್ಟರ್‌ ಖ್ಯಾತಿಯ ಮುಂಬೈಕರ್‌ ಸಚಿನ್‌ ತೆಂಡುಲ್ಕರ್‌ ಅವರಿಗೆ ಲಭಿಸಿದೆ. ಮಧ್ಯಾಹ್ನ 1.25ಕ್ಕೆ ಇವರು ಗಂಟೆ ಬಾರಿಸುವ ಮೂಲಕ ಭಾರತ-ವೆಸ್ಟ್‌ ಇಂಡೀಸ್‌ ನಡುವಿನ 4ನೇ ಏಕದಿನ ಪಂದ್ಯದ ಆರಂಭವನ್ನು ಸಾರಲಿದ್ದಾರೆ. ಇದಕ್ಕೂ ಮುನ್ನ ತೆಂಡುಲ್ಕರ್‌ ಇದೇ ವರ್ಷದ ಭಾರತ-ಇಂಗ್ಲೆಂಡ್‌ ನಡುವಿನ ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ಮೊದಲ ದಿನ ಗಂಟೆ ಬಾರಿಸಬೇಕಿತ್ತು. ಆದರೆ ಭಾರೀ ಮಳೆಯಿಂದ ಈ ಅವಕಾಶ ಅವರಿಗೆ ತಪ್ಪಿಹೋಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next