Advertisement

ಮಂಗಳೂರು: ಬಾಲಮಂದಿರದ ಬಾಲಕ ನಾಪತ್ತೆ

12:41 AM Feb 24, 2023 | Team Udayavani |

ಮಂಗಳೂರು: ನಗರದ ಬಾಲ ಮಂದಿರಕ್ಕೆ ದಾಖಲಾಗಿದ್ದ ಬಾಗಲಕೋಟೆ ಮೂಲದ ಬಸವರಾಜ್‌ (17) ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆಗೆ ಸೇರಿದ್ದ ವೇಳೆ ಅಲ್ಲಿಂದ ನಾಪತ್ತೆಯಾಗಿದ್ದಾನೆ.

Advertisement

ಬೋಂದೆಲ್‌ ಕೃಷ್ಣನಗರ ಬಾಲ ಮಂದಿರಕ್ಕೆ ಫೆ. 21ರಂದು ದಾಖಲಾ ಗಿದ್ದು, ಅಂದು ರಾತ್ರಿ 7 ಗಂಟೆ ವೇಳೆೆ ಸೋಪು ತಿಂದು ಅಸ್ವಸ್ಥನಾಗಿದ್ದ. ತತ್‌ಕ್ಷಣ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿ ಆರೋಗ್ಯದ ಮೇಲೆ ನಿಗಾ ಇರಿಸಲು 2-3 ದಿನ ಒಳರೋಗಿಯಾಗಿ ದಾಖಲಿಸಿದ್ದರು. ಫೆ. 21ರಂದು ರಾತ್ರಿ 7.15ರ ವೇಳೆಗೆ ಕೈ ತೊಳೆಯಲಿದೆ ಎಂದು ಹೇಳಿ ಹೊರಗಡೆ ಬಂದ ಆತ, ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ. ಆಸ್ಪತ್ರೆಯ ಕಾವಲುಗಾರರನ್ನು ವಿಚಾರಿಸಿ ಸುತ್ತಮುತ್ತ ಹುಡುಕಿದರೂ ಪತ್ತೆಯಾಗಿಲ್ಲ. ಅಲ್ಲಿಂದ ಮನೆಗೂ ಹೋಗದೆ ನಾಪತ್ತೆಯಾಗಿದ್ದಾನೆ. ಈ ಕುರಿತು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 5 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ನೀಲಿ ಬಣ್ಣದ ಉದ್ದ ಕೈ ಟಿ-ಶರ್ಟ್‌, ಕಪ್ಪು ಪ್ಯಾಂಟ್‌ ಧರಿಸಿದ್ದು, ಕನ್ನಡ ಭಾಷೆ ಬಲ್ಲವನಾಗಿದ್ದಾನೆ. ಈತನ ಬಗ್ಗೆ ಮಾಹಿತಿ ಇದ್ದಲ್ಲಿ ಪಾಂಡೇಶ್ವರ ಠಾಣೆ ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next