Advertisement

ಕೆಟ್ಟಿರುವ ವೆಂಟಿಲೇಟರ್ ಗಳ ರಿಪೇರಿಗೆ ಮುಂದಾದ ಬಾಷ್ ಕಂಪನಿ : ಡಿಸಿಎಂ

08:45 PM May 29, 2021 | Team Udayavani |

ಬೆಂಗಳೂರು: ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಕೆಟ್ಟು ನಿಂತಿರುವ ವೆಂಟಿಲೇಟರ್ʼಗಳನ್ನು ಉಚಿತವಾಗಿ ರಿಪೇರಿ ಮಾಡಿಕೊಡಲು ಬಾಷ್ ಕಂಪನಿ ಮುಂದೆ ಬಂದಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Advertisement

ಬೆಂಗಳೂರಿನಲ್ಲಿ ಶನಿವಾರದಂದು ಬಾಷ್ ಉಪಾಧ್ಯಕ್ಷ ರಮೇಶ ಸಾಲಿಗ್ರಾಮ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ ನಂತರ ಈ ವಿಷಯ ತಿಳಿಸಿದ ಅವರು, ಆ ಕಂಪನಿಯೇ ಸ್ವ ಇಚ್ಛೆಯಿಂದ ಮುಂದೆ ಬಂದು ವೆಂಟಿಲೇಟರ್ ರಿಪೇರಿ ಮಾಡಿಕೊಡುವುದಾಗಿ ಹೇಳಿದೆ. ಈ ಕಾರಣಕ್ಕೆ ಬಾಷ್ ಕಂಪನಿಯನ್ನು ಶ್ಲಾಘಿಸುವುದಾಗಿ ಹೇಳಿದರು.

ಸರಕಾರಿ ಆಸ್ಪತ್ರೆಗಳಲ್ಲಿ ಇರುವ ಅನೇಕ ವೆಂಟಿಲೇಟರ್ʼಗಳು ಕೆಟ್ಟಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಕೂಡ ಬಂದಿವೆ. ಹೀಗಾಗಿ ಸಿಎಸ್ʼಆರ್ ನೆರವಿನಿಂದ ವೆಂಟಿಲೇಟರ್ ರಿಪೇರಿ ಮಾಡಿಕೊಡಲಾಗುವುದು ಎಂದು ರಮೇಶ್ ಭರವಸೆ ನೀಡಿದರು.

ಇದನ್ನೂ ಓದಿ :10 ದಿನಗಳಲ್ಲಿ ರೈತರಿಗೆ 565 ಕೋಟಿ ರೂ. ಬಾಕಿ ಪಾವತಿ : ಎಂ.ಟಿ.ಬಿ.ನಾಗರಾಜ್‌

ಬಾಷ್ ನಿರ್ಧಾರ ಸ್ವಾಗತಾರ್ಹ. ವೆಂಟಿಲೇಟರ್ ಗಳು ಎಷ್ಟು, ಎಲ್ಲಿ ಕೆಟ್ಟಿವೆ ಎಂಬುದನ್ನು ಪತ್ತೆ ಮಾಡಿ ನಂತರ ಕಂಪನಿಗೆ ವಹಿಸಲಾಗವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next