Advertisement

ಬೊಮ್ಮಾಯಿ ಅವರೇ ಯೋಗಿ ತರಹ ಮೈ ಕೊಡವಿ ನಿಲ್ಲಿ: ಮುತಾಲಿಕ್ ಕಿಡಿ

02:05 PM Apr 18, 2022 | Team Udayavani |

ಚಿಕ್ಕಮಗಳೂರು: ‘ಹುಬ್ಬಳ್ಳಿ ಯಲ್ಲಿ ಗಲಾಟೆ ಮಾಡಿದವರು ಯಾರೂ ಅಮಾಯಕರಲ್ಲ, ಅವರ ವಿರುದ್ಧ ಗೂಂಡಾ ಕಾಯಿದೆ ಅಡಿಯಲ್ಲಿ ಕೇಸ್ ದಾಖಲಿಸಬೇಕು’ ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

Advertisement

ಬಾಳೆಹೊನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ಪೂರ್ವ ಯೋಜಿತ ಕಾರ್ಯಕ್ರಮ. ಬಸವರಾಜ್ ಬೊಮ್ಮಾಯಿ ಅವರೇ ಯೋಗಿ ತರಹ ಮೈ ಕೊಡವಿ ನಿಲ್ಲಿ. ಯಾರು ಅಮಾಯಕರಲ್ಲ ಎಲ್ಲರೂ ಗುಂಡಾಗಳೇ. ಅಲ್ಲಿನ ಶಾಸಕ ಪ್ರಸಾದ್ ಅಬ್ಬಯ್ಯ ಅವರು ಹೊಣೆಗಾರರು. ಮುಸ್ಲಿಂ ಸಮಾಜ ಹತಾಶವಾಗಿದ್ದು, ಅಪಹಾಸ್ಯ ಒಳಗಾಗುತ್ತಿದ್ದಾರೆ.ಅಕ್ರೋಶ ಗಲಾಟೆಗೆ ಕಾರಣವಾ ಗುತ್ತಿದೆ. ಮೌಲಿಗಳು ಇಂತರವನ್ನು ಹದ್ದುಬಸ್ತಿನಲ್ಲಿ ಇಡಬೇಕು’ ಎಂದು ಆಗ್ರಹಿಸಿದರು.

‘ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ನವರು ಮುಸ್ಲಿಮರನ್ನ ಯಾವಾಗಲು ಅಮಾಯಕ ರೆಂದು ಹೇಳುತ್ತಾರೆ. ಅಮಾಯಕರು ಎನ್ನುವುದೇ ಒಂದು ಸ್ಟ್ಯಾಂಡ್. ನಾಚಿಕೆ ಆಗುವುದಿಲ್ಲವೇ ನಿಮಗೆ? ಅಮಾಯಕರ ಕುಮಾರಸ್ವಾಮಿ ಅವರೇ, ಹೋಮ ಹವನ ಮಾಡುವಂತಹ ನೀವು ಪೋಲಿಸ್ ಸ್ಟೇಷನ್ ಮೇಲೆ, ದೇವಸ್ಥಾನದ ಮೇಲೆ ಕಲ್ಲು ತೂರಿದವರು ಅಮಾಯಕರೆನ್ನುತ್ತೀರಾ’ ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ರಾಮನ ಹೆಸರಲ್ಲಿ ರಾವಣ ರಾಜ್ಯ ಮಾಡಲು ಹೊರಟವರಿಂದ ನಾನೇನು ಕಲಿಯಬೇಕಿಲ್ಲ: ಹೆಚ್ ಡಿಕೆ

‘ಮುಸ್ಲಿಮರ ಪರ ನಿಂತು ಕಾಂಗ್ರೆಸ್ ನೆಲಕಚ್ಚಿದೆ, ಕುಮಾರಸ್ವಾಮಿಯವರೇ ಮುಂದಿನ ದಿನಗಳಲ್ಲಿ ಇದೇ ನಿಲುವು ಅನುಸರಿಸಿದರೆ ಜೆಡಿಎಸ್ ಕೂಡ ನೆಲಕಚ್ಚುತ್ತದೆ. ಅಲ್ಲಿರುವ ಅಕ್ರಮ ಮನೆಗಳಿವೆ ಅದನ್ನು ಕಿತ್ತು ಬಿಸಾಕಿ’ ಎಂದು ಸವಾಲೆಸೆದರು.

Advertisement

‘ಬುದ್ದಿ ಜೀವಿಗಳು ಬಾಯಿ ಮುಚ್ಚಿಕೊಂಡಿದ್ದಾರೆ. ಅವರೆಲ್ಲರೂ ಮುಸ್ಲಿಂ ಕ್ರಿಶ್ವಿಯನರ ಎಜೆಂಟರು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next