Advertisement

ದಿಲ್ಲಿ ಚಲೋ: ರೈತ ಚಳುವಳಿಗೆ ಬಾಲಿವುಡ್ ಬೆಂಬಲ

08:33 PM Dec 07, 2020 | Adarsha |

ಮುಂಬೈ: ಕೇಂದ್ರದ ಕೃಷಿ ನೀತಿ ವಿರೋಧಿಸಿ ನಡೆಯುತ್ತಿರುವ ರೈತ ಚಳವಳಿಗೆ ವಿಶ್ವದೆಲ್ಲೆಡೆ ಸ್ಪಂದನೆ ದೊರೆಯುತ್ತಿದೆ. ಈ ನಡುವೆ  ಇದೀಗ ಈ ಚಳುವಳಿಯಲ್ಲಿ ರೈತರ ಬೆನ್ನಿಗೆ ಚಿತ್ರರಂಗವೂ ನಿಂತುಕೊಂಡಿದೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ,ಸೋನಮ್ ಕಪೂರ್  ಒಳಗೊಂಡಂತೆ ಹಲವಾರು ನಟ ನಟಿಯರು ರೈತರ ಪರ ದನಿ ಎತ್ತಿದ್ದಾರೆ.

Advertisement

ರೈತ ಚಳುವಳಿಯ ಕುರಿತಾಗಿ ಟ್ವೀಟ್ ಮಾಡಿರುವ ನಟಿ ಪ್ರಿಯಾಂಕಾ ಚೋಪ್ರಾ ನಮ್ಮ ರೈತರು ನಮ್ಮ ದೇಶದ ಆಹಾರ ಸೇನಾನಿಗಳು. ಅವರ ಸಮಸ್ಯೆಗಳು ಈಡೇರಬೇಕು. ಈ  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆದಷ್ಟು ಶೀರ್ಘವಾಗಿ ರೈತರ ಸಮಸ್ಯೆ ಬಗೆಹರಿಯಲಿ ಎಂದು ಹೇಳಿದ್ದಾರೆ.

ಇನ್ನೋರ್ವ ಬಾಲಿವುಡ್ ನಟಿ ಸೋನಮ್ ಕಪೂರ್ ಕೂಡಾ ರೈತ ಚಳವಳಿಯ ಕುರಿತಾಗಿ ಬೆಂಬಲ ವ್ಯಕ್ತ ಪಡಿಸಿದ್ದು, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರೈತರ ಚಳವಳಿಯ ಕೆಲವು ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಬೇಸಾಯ ಆರಂಭವಾದಾಗ ಇತರ ಕಲೆಗಳು ಅನುಸರಿಸುತ್ತವೆ. ಆದ್ದರಿಂದ ರೈತರು ಮಾನವ ನಾಗರೀಕತೆಯ ಹರಿಕಾರರು ಎಂಬ ‘ಡೇನಿಯಲ್ ವೆಸ್ ಸ್ಟರ್’ ಅವರ ಸಾಲುಗಳನ್ನು ಬಳಸಿಕೊಂಡಿದ್ದಾರೆ.

ಇದನ್ನೂ ಓದಿ:ವಾಹನ ಚಾಲಕರ ಮೇಲೆ ಕ್ಯಾಮೆರಾ ಕಣ್ಣು

ಜೊತೆಗೆ ಇನ್ನೂ ಹಲವು ಬಾಲಿವುಡ್ ನಟರು ರೈತರ ಬೆಂಬಲಕ್ಕೆ ನಿಂತಿದ್ದು ಖ್ಯಾತ ನಟ ಹಾಗೂ ಗಾಯಕ  ಆಗಿರುವ ದಿಲ್ಜಿತ್ ದೋಸಾಂಜ್ ದೆಹಲಿಯ ಗಡಿಭಾಗದಲ್ಲಿ ರೈತರ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ನಾವು ಸರ್ಕಾರದ ಜೊತೆ ಮನವಿ ಮಾಡಿಕೊಳ್ಳುತ್ತಿರುವುದು ಒಂದೆ. ದಯವಿಟ್ಟು ನಮ್ಮ ರೈತರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿ ಎಂದಿದ್ದಾರೆ. ಇನ್ನು ನಟ ರಿತೇಶ್ ದೇಶ್ಮುಖ್ ಕೂಡಾ ನಾವು ತಿನ್ನುತ್ತಿರುವ ಆಹಾರ ರೈತರಿಂದ ಸಿಕ್ಕಿದ್ದು ಅವರಿಗೆ ಧನ್ಯವಾದ ಸಲ್ಲಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next