Advertisement

ಬೈಂದೂರು ಯೆಡ್ತರೆ: ಹೊಳೆಯಲ್ಲಿ ಯುವಕನ ಶವ ಪತ್ತೆ, ಕಾಲು ಜಾರಿ ಬಿದ್ದಿರುವ ಶಂಕೆ

04:42 PM Sep 15, 2020 | keerthan |

ಉಪ್ಪುಂದ: ಇಲ್ಲಿನ ಸುಮನಾವತಿ ಹೊಳೆಯಲ್ಲಿ ಸ್ಥಳೀಯ ಯುವಕನ ಶವ ಪತ್ತೆಯಾಗಿದ್ದು, ಎರಡು ದಿನಗಳ ಹಿಂದೆ ಕಾಲು ಜಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

Advertisement

ಮೃತ ಯುವಕನನ್ನು ರಾಹುತನ್ ಕಟ್ಟೆ, ಯೆಡ್ತರೆ ನಿವಾಸಿ ಶಿವರಾಜು (28) ಎಂದು ಗುರುತಿಸಲಾಗಿದೆ.

ಮೃತ ಯುವಕ ಶಿವರಾಜು ತಾಯಿ ಮತ್ತು ಅಜ್ಜಿಯೊಂದಿಗೆ ವಾಸವಿದ್ದ ಎನ್ನಲಾಗಿದೆ. ಇಂದು ಮುಂಜಾನೆ ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ಸುಮನಾವತಿ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ಮೃತದೇಹವನ್ನು ಗಮನಿಸಿ ಹೊಳೆಯಿಂದ ಹೊರತೆಗೆದಿದ್ದು, ಎರಡು ದಿನದ ಹಿಂದೆ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ: ಮಾಜಿ ಸಚಿವರ ಪುತ್ರ ಆದಿತ್ಯ ಆಳ್ವ ಮನೆ ಮೇಲೆ ಸಿಸಿಬಿ ದಾಳಿ

ಶಿವರಾಜು ಅವಿವಾಹಿತನಾಗಿದ್ದು, ಕೆಲವೊಮ್ಮೆ ಮನೆಬಿಟ್ಟರೆ ಒಂದೆರಡು ದಿನ ಮನೆಗೆ ಬರುತ್ತಿರಲಿಲ್ಲ ಎನ್ನಲಾಗಿದೆ. ಹೀಗಾಗಿಯೇ ಮನೆಯವರು ಈತನನ್ನು ಹುಡುಕಾಡಿರಲಿಲ್ಲ. ಈತ ಊರಿನಲ್ಲಿಯೂ ಅಷ್ಟಾಗಿ ಜನರೊಂದಿಗೆ ಬೆರೆಯುತ್ತಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement

ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next