Advertisement

ಸಂತ ನಿರಂಕಾರಿ ಮಂಡಳ:ಮುಂಬಯಿ ಸಮಿತಿಯಿಂದ ರಕ್ತದಾನ ಶಿಬಿರ

05:15 PM Jun 28, 2019 | Vishnu Das |

ಮುಂಬಯಿ: ಸಂತ ನಿರಂಕಾರಿ ಮಂಡಳ ಮುಂಬಯಿ ವತಿಯಿಂದ ರಕ್ತದಾನ ಶಿಬಿರವು ಜೂ. 23ರಂದು ವರ್ಲಿಯಲ್ಲಿ ನಡೆಯಿತು. ಸಂತ ನಿರಂಕಾರಿ ಚಾರಿಟೇಬಲ್‌ ಫೌಂಡೇಷನ್‌ ವತಿಯಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು.

Advertisement

ಶಿಬಿರದಲ್ಲಿ 178 ಶಿಬಿರಾರ್ಥಿಗಳು ರಕ್ತದಾನಗೈದರು. ಸಂತ ನಿರಂಕಾರಿ ಬ್ಲಿಡ್‌ ಬ್ಯಾಂಕ್‌ ವಿಲೇಪಾರ್ಲೆಯ ಸಿಬಂದಿಗಳು ಸಹಕರಿಸಿದರು. ಬ್ಲಿಡ್‌ ಬ್ಯಾಂಕ್‌ನ ಮುಖ್ಯಸ್ಥ ಮಾರುತಿ ಕಸಾರೆ ಅವರ ನೇತೃತ್ವದಲ್ಲಿ ರಕ್ತದಾನ ನಡೆಯಿತು. ಮುಂಬಯಿ ಮಹಾನಗರ ಪಾಲಿಕೆಯು ಹೆಚ್ಚುವರಿ ಮೇಯರ್‌ ಹೇಮಾಂಗಿ ವರ್ಲಿಕರ್‌ ಅವರು ಶಿಬಿರವನ್ನು ಉದ್ಘಾಟಿಸಿ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.

ವಲಯದ ಮುಖ್ಯಸ್ಥ ಭುಪೇಂದ್ರ ಚೌಗ್‌, ಕ್ಷೇತ್ರಿಯ ಸೇವಾ ದಳದ ಸಂಚಾಲಕ ಶಂಕರ್‌ ಸೋನಾವಣೆ, ಡಿ. ಕೆ. ಮೋಹಿತೆ, ಸೆಕ್ಟರ್‌ ಸಂಯೋಜಕ ಗೋಪಿನಾಥ್‌ ಬುಮುಗಡೆ, ನಾಮೆªàವ್‌ ಶಿಂಧೆ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಕಾರ್ಯಕರ್ತರು ಶಿಬಿರದ ಯಶಸ್ಸಿಗೆ ಸಹಕರಿಸಿದರು.

ಶಿಬಿರದಲ್ಲಿ ಸ್ಥಾನೀಯ ರಾಜಕೀಯ ಧುರೀಣರು, ಸ್ಥಳೀಯ ಸಮಾಜ ಸೇವಕರು, ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ಶುಭಹಾರೈಸಿದರು. ಸಂತ ನಿರಂಕಾರಿ ಮಂಡಳದ ನಿತಿನ್‌ ಸರ್ದೇಸಾಯಿ, ಆಶೀಷ್‌ ಚೆಂಬುರ್ಕರ್‌, ಯಶವಂತ್‌ ಕಿಲೇದಾರ್‌, ನಿಶಿಕಾಂತ್‌ ಶಿಂಧೆ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next