Advertisement

ಎಚ್‌.ಡಿ.ದೇವೇಗೌಡರಿಂದ ಬ್ಲಾಕ್‌ ಮೇಲ್‌: ಪುಟ್ಟಸ್ವಾಮಿ

12:30 AM Feb 01, 2019 | |

ಬೆಳಗಾವಿ: ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌.ಡಿ.ದೇವೇಗೌಡರು ತಮ್ಮ ಪಕ್ಷದ ವ್ಯಾಪ್ತಿ ವಿಸ್ತರಣೆ ಮಾಡಿಕೊಳ್ಳಲು ಕಾಂಗ್ರೆಸ್‌ಗೆ ಬ್ಲಾಕ್‌ ಮೇಲ್‌ ಮಾಡುವ ಪ್ರಯತ್ನ ಆರಂಭಿಸಿದ್ದಾರೆಂದು ಬಿಜೆಪಿ ಮುಖಂಡ ಬಿ.ಜೆ. ಪುಟ್ಟಸ್ವಾಮಿ ಬಾಂಬ್‌ ಸಿಡಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಸ್ಥಿತಿ ಒಪ್ಪಿಗೆ ಇಲ್ಲದೇ ನಡೆದ ಮದುವೆಯಂತಾಗಿದೆ. ಇದರಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಎಚ್‌.ಡಿ. ಕುಮಾರಸ್ವಾಮಿ ಸಂವಿಧಾನಾತ್ಮಕ ಸಿಎಂ ಆದರೆ, ಸಿದ್ದರಾಮಯ್ಯ ಅಸಂವಿಧಾನಾತ್ಮಕ ಮುಖ್ಯಮಂತ್ರಿ. ಇಬ್ಬರಿಗೂ ಸ್ವಪ್ರತಿಷ್ಠೆ.ಎಲ್ಲವನ್ನೂ ತಾವೇ ಪಡೆದುಕೊಳ್ಳಬೇಕೆಂದು ಸಿದ್ದರಾಮಯ್ಯ ಕಾಂಗ್ರೆಸ್‌ ಶಾಸಕರನ್ನು ಎತ್ತಿಕಟ್ಟುತ್ತಿದ್ದರೆ, ಈ ಕಡೆ ಮಗನ ಪರವಾಗಿ ದೇವೇಗೌಡರು ಬ್ಲಾಕ್‌ ಮೇಲ್‌ ಮಾಡುತ್ತಿದ್ದಾರೆ. ದೇವೇಗೌಡರು ಅಧಿಕಾರಕ್ಕಾಗಿ ಏನೂ ಮಾಡಲು ಸಿದ್ಧ. ಅವರ ಬುಗುರಿ ಆಟಕ್ಕೆ ಬಲಿಯಾಗುವುದಿಲ್ಲ ಎಂದು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next