Advertisement

ಶಾಸಕ ಮುನ್ನಿರತ್ನ ನಿವಾಸದ ಬಳಿ ನಿಗೂಢ ಸ್ಫೋಟ : ವ್ಯಕ್ತಿ ಛಿದ್ರ

09:43 AM May 20, 2019 | Vishnu Das |

ಬೆಂಗಳೂರು: ನಗರದ ವೈಯಾಲಿ ಕಾವಲ್‌ನ 11 ಬಿ ಕ್ರಾಸ್‌ ಬಳಿ ಭಾನುವಾರ ಬೆಳಗ್ಗೆ ನಿಗೂಢ ಸ್ಫೋಟ ಸಂಭವಿಸಿ ವ್ಯಕ್ತಿಯೊಬ್ಬರು ಛಿದ್ರವಾಗಿರುವ ಅವಘಡ ನಡೆದಿದೆ.ಕಾಂಗ್ರೆಸ್‌ ಶಾಸಕ ಮುನಿರತ್ನ ಅವರ ನಿವಾಸದ ಬಳಿಯಲ್ಲಿಯೇ ಈ ಅವಘಡ ಸಂಭವಿಸಿದೆ.

Advertisement

ಪ್ರಾಥಮಿಕರ ಮಾಹಿತಿಗಳು ಮತ್ತು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವ ಹಾಗೆ ಸಿಲಿಂಡರ್‌ ಸ್ಫೋಟ ಎಂದು ಹೇಳಲಾಗಿದೆ.

ವೆಂಕಟೇಶ್‌ ಅನ್ನುವ ವ್ಯಕ್ತಿ ಸಾವನ್ನಪ್ಪಿದವರು ಎನ್ನಲಾಗಿದ್ದು, ಶಾಸಕ ಮುನಿರತ್ನ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳು ದೌಡಾಯಿಸಿದ್ದು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.

ಹೆಚ್ಚಿನ ವಿವರಗಳನ್ನುನಿರೀಕ್ಷಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next