Advertisement

ನಗರಸಭೆ ಅಧಿಕಾರ ಚುಕ್ಕಾಣಿಯತ್ತ ಬಿಜೆಪಿ ದೃಷ್ಟಿ

06:20 AM May 17, 2018 | Team Udayavani |

ಉಡುಪಿ: ವಿಧಾನಸಭಾ ಚುನಾವಣೆಯಲ್ಲಿ ಉಡುಪಿಯಲ್ಲಿ ಗೆಲುವು ಸಾಧಿಸಿ ಹುಮ್ಮಸ್ಸು ಹೆಚ್ಚಿಸಿಕೊಂಡಿರುವ ಬಿಜೆಪಿ ಈಗ ಉಡುಪಿ ನಗರಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಇದೇ ಜುಲೈ ತಿಂಗಳಿನಲ್ಲಿ ನಗರಸಭೆಯ ಆಡಳಿತ ಅವಧಿ ಮುಕ್ತಾಯಗೊಳ್ಳಲಿದೆ. ತನ್ನ ಕೈಯಲಿದ್ದ ನಗರಸಭೆ ಆಡಳಿತವನ್ನು ಕಳೆದುಕೊಂಡಿದ್ದ ಬಿಜೆಪಿಗೆ ಈ ಚುನಾವಣೆಯಲ್ಲಿ ನಗರ ಭಾಗದಲ್ಲಿ ಭರ್ಜರಿ ಮತಗಳು ದೊರೆತಿರುವುದರಿಂದ ಈ ಬಾರಿ ನಗರಸಭೆ ಕೂಡ ತನ್ನ ತೆಕ್ಕೆಗೆ ಬರಬಹುದೆಂಬ ವಿಶ್ವಾಸ ಮೂಡಿದೆ. 

Advertisement

ಈಗ ಉಡುಪಿ ಜಿ.ಪಂ., ಮೂರೂ ತಾ.ಪಂ., ಕಾರ್ಕಳ ಪುರಸಭೆ, ಬಹುತೇಕ ಗ್ರಾ.ಪಂ.ಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕುಂದಾಪುರ ಪುರಸಭೆ, ಸಾಲಿಗ್ರಾಮ ಪ.ಪಂ.ನಲ್ಲಿ ಬಿಜೆಪಿ ಸದಸ್ಯರ ಬೆಂಬಲದಿಂದ ಅಧ್ಯಕ್ಷರು ಆಡಳಿತ ನಡೆಸುತ್ತಿದ್ದಾರೆ. ಕಾಪು ಪುರಸಭೆಯಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಇಲ್ಲಿ ಬಿಜೆಪಿಗೆ ಕೊರತೆ ಇರುವುದು ಒಂದು ಸದಸ್ಯ ಬಲ ಮಾತ್ರ. ಈಗ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಬಗಲಿಗೆ ಹಾಕಿಕೊಂಡಿದೆ. 

ಹೀಗಿರುವಾಗ 1969ರಿಂದ ಜನಸಂಘದ ಆಡಳಿತದಲ್ಲಿದ್ದ ಉಡುಪಿ ನಗರಸಭೆಯನ್ನು ಮತ್ತೆ ಬಗಲಿಗೆ ಹಾಕಿಕೊಳ್ಳಲು ಬಿಜೆಪಿ ತುದಿಗಾಲಲ್ಲಿ ನಿಂತಿದೆ.  

ಮಿಷನ್‌ 30 
ನಗರಸಭೆಯಲ್ಲಿ ಭ್ರಷ್ಟಾಚಾರ, ಅವ್ಯವಹಾರ ನಡೆಯುತ್ತಿದೆ. ಈ ದುರಾಡಳಿತಕ್ಕೂ ಜನತೆ ಒಂದು ರೀತಿಯಲ್ಲಿ ಈಗ ಉತ್ತರ ನೀಡಿದ್ದಾರೆ, ಮುಂದೆ ನಗರಸಭಾ ಚುನಾವಣೆಯಲ್ಲಿಯೂ ಉತ್ತರ ನೀಡಲಿದ್ದಾರೆ ಎಂದು ನಗರಸಭೆ ವಿಪಕ್ಷದ ಸದಸ್ಯ ಯಶ್‌ಪಾಲ್‌ ಸುವರ್ಣ ಪ್ರತಿಕ್ರಿಯಿಸಿದ್ದಾರೆ.”ಮಿಷನ್‌ 30’ನ್ನು ಮುಂದಿಟ್ಟುಕೊಂಡು ನಗರಸಭೆ ಚುನಾವಣೆಗೆ ಈಗಾಗಲೇ ಸಿದ್ಧವಾಗಿದ್ದೇವೆ ಎಂದು ಬಿಜೆಪಿ ಮಾಜಿ ನಗರ ಸಮಿತಿ ಅಧ್ಯಕ್ಷ ರಾಘವೇಂದ್ರ ಕಿಣಿ  ತಿಳಿಸಿದ್ದಾರೆ. 35 ಸದಸ್ಯಬಲದ ನಗರಸಭೆಯಲ್ಲಿ ಪ್ರಸ್ತುತ 22 ಕಾಂಗ್ರೆಸ್‌ ಮತ್ತು 13 ಮಂದಿ ಬಿಜೆಪಿ ಸದಸ್ಯರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next