Advertisement

Raichur; ಬಿಜೆಪಿಯವರ ಪ್ರವಾಸ ಬರ ಅಧ್ಯಯನಕ್ಕೆ ಅಲ್ಲ, ಚುನಾವಣೆ ಪ್ರಚಾರಕ್ಕೆ: ಚಲುವರಾಯಸ್ವಾಮಿ

05:00 PM Nov 06, 2023 | Team Udayavani |

ರಾಯಚೂರು: ಬಿಜೆಪಿಯವರು ಬರ ಅಧ್ಯಯನಕ್ಕಾಗಿ ರಾಜ್ಯ ಪ್ರವಾಸ ಮಾಡುತ್ತಿಲ್ಲ. ಮುಂದಿನ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.

Advertisement

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಅವರಿಗೆ ರಾಜ್ಯದ ರೈತರ ಬಗ್ಗೆ ನಿಜವಾದ ಕಾಳಜಿಯಿದ್ದರೆ ಕೇಂದ್ರದಿಂದ ಬರ ಪರಿಹಾರ ಬಿಡುಗಡೆ ಮಾಡಿಸಲಿ. ರಾಜ್ಯದಲ್ಲಿ ಬಹುತೇಕ ಸಂಸದರು ಬಿಜೆಪಿಯವರೇ ಇದ್ದಾರಲ್ಲ. 17 ಸಾವಿರ ಕೋಟಿ ಪರಿಹಾರ ಹಣ ಕೇಂದ್ರದಿಂದ ತಂದರೆ ಅವರನ್ನು ನಾವೇ ಸನ್ಮಾನ ಮಾಡುತ್ತೇವೆ. ಕೇಂದ್ರ ಸರ್ಕಾರ ಬರ ಪರಿಹಾರ ನೀಡದಿದ್ದರೆ ನಾವೇ ನೀಡುತ್ತೇವೆ ಎಂದರು.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೆಂಬಲ ನೀಡುವ ಬದಲು ಅವರೇ ಕಾಂಗ್ರೆಸ್ ಸೇರಿಕೊಳ್ಳಲಿ. ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿಯಿಲ್ಲ. ಅವರು ರಾಜ್ಯ ಪ್ರವಾಸ ಮಾಡಿದರೆ ಒಳ್ಳೆಯದು. ಏನಾದರೂ ಸಲಹೆಗಳನ್ನು ನೀಡಿದರೆ ಖಂಡಿತ ಸ್ವೀಕರಿಸುತ್ತೇವೆ. ಆದರೆ, ಹಿಂದೆ ರೈತರ ಸಾಲಮನ್ನಾ ಮಾಡುವುದಾಗಿ ಒಂದು ರೂ. ಬಿಡುಗಡೆ ಮಾಡಲಿಲ್ಲ. ಬದಲಿಗೆ ರೈತರಿಗೆ ಸುಸ್ತಿ ಸಾಲ ಹೆಚ್ಚಾಗಿದೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next