Advertisement

72 ಗಂಟೆ ನಿಷೇಧಕ್ಕೊಳಗಾದ ಸಾಧ್ವಿ ಪ್ರಜ್ಞಾರಿಂದ ಟೆಂಪಲ್‌ ರನ್‌

10:03 AM May 03, 2019 | Team Udayavani |

ಭೋಪಾಲ್‌: 72 ಗಂಟೆಗಳ ಕಾಲ ಪ್ರಚಾರಕ್ಕೆ ನಿರ್ಬಂಧ ಹೇರಿ ಚುನಾವಣಾ ಆಯೋಗ ಆದೇಶಹೊರಡಿಸಿದ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರು ಗುರುವಾರ ದೇವಾಲಯಗಳ ಯಾತ್ರೆ ನಡೆಸಲು ಮುಂದಾಗಿದ್ದಾರೆ.

Advertisement

ರಿವೇರಾ ಪಟ್ಟಣದ ನಿವಾಸದಲ್ಲಿ ಸಾಧ್ವಿ ಸಾರ್ವಜನಿಕರನ್ನು ಭೇಟಿಯಾದರು. ಬಳಿಕ ಭೂಪಾಲದ ಕರ್ಫ್ಯೂ ವಾಲಿ ಮಾತಾ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಕೆಲ ದೇವಾಲಯಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರ ಉಗ್ರ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ್‌
ಕರ್ಕರೆ ಬಗ್ಗೆ ಹಾಗೂ ಬಾಬರಿ ಮಸೀದಿ ಧ್ವಂಸಗೊಳಿಸಿದ ಕುರಿತು ನೀಡಿದವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಈ ನಿಷೇಧ ಹೇರಲಾಗಿದೆ.

ನಿಮ್ಮ ಹೇಳಿಕೆಯನ್ನು ನಾವು ಕಟು ಪದಗಳಿಂದ ಖಂಡಿಸುತ್ತೇವೆ ಮತ್ತು ಭವಿಷ್ಯದಲ್ಲಿ ಇಂಥ ದುರ್ವರ್ತನೆ ತೋರದಂತೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದೂ ಆಯೋಗ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next