Advertisement

ವಿಶ್ವಾಸಮತ ಗೆದ್ದ ಆಪ್‌ ಸರ್ಕಾರ

09:03 PM Sep 01, 2022 | Team Udayavani |

ನವದೆಹಲಿ: ಬಿಜೆಪಿಯ ಅಪರೇಷನ್‌ ಕಮಲ ವಿರುದ್ಧ ಹರಿಹಾಯ್ದಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿಧಾನಸಭೆಯಲ್ಲಿ ಗುರುವಾರ ಮಂಡಿಸಿದ್ದ ವಿಶ್ವಾಸಮತ ಯಾಚನೆಯಲ್ಲಿ ನಿರೀಕ್ಷೆಯಂತೆ ಗೆಲವು ಸಾಧಿಸಿದ್ದಾರೆ.

Advertisement

70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ 62 ಆಪ್‌ ಶಾಸಕರು ಮತ್ತು ಎಂಟು ಮಂದಿ ಬಿಜೆಪಿ ಶಾಸಕರಿದ್ದಾರೆ. ಸದನದಲ್ಲಿ ಹಾಜರಿದ್ದ ಎಲ್ಲ 58 ಆಪ್‌ ಶಾಸಕರು ಬಹುಮತದ ಪರ ಮತ ಹಾಕಿದರು.

ಈ ವೇಳೆ ಮಾತನಾಡಿದ ಕೇಜ್ರಿವಾಲ್‌, “ಬಿಜೆಪಿಯಿಂದ ಆಪ್‌ ಶಾಸಕರ ಖರೀದಿ ಸಾಧ್ಯವಿಲ್ಲ ಎಂಬುದು ಇದರಿಂದ ಸಾಬೀತಾಗಿದೆ.  ಡಿಸಿಎಂ ಮನೀಶ್‌ ಸಿಸೋಡಿಯಾ ನಿವಾಸದ ಮೇಲೆ ಸಿಬಿಐ ದಾಳಿಯ ನಂತರ ಗುಜರಾತ್‌ನಲ್ಲಿ ಆಪ್‌ ಮತ ಗಳಿಕೆ ಪ್ರಮಾಣ ಶೇ.4 ಹೆಚ್ಚಾಗಿದೆ. ಅವರ ಬಂಧನವಾದರೆ ಶೇ.6ಕ್ಕೆ ಹೆಚ್ಚಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next