Advertisement

ಬಿಜೆಪಿಯದ್ದು ಉದ್ದೇಶ ಸಾಫಲ್ಯ ಆಡಳಿತ

05:11 PM Jun 06, 2020 | Suhan S |

ಅಂಕೋಲಾ: ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ವಿರೋಧ ಪಕ್ಷಗಳು ಇಂದಿರಾ ಕ್ಯಾಂಟೀನ್‌ ಹೆಸರನ್ನು ಬದಲಿಸುವ ಗುಲ್ಲೆಬ್ಬಿಸಿದ್ದವು. ನಮ್ಮ ಸರ್ಕಾರದ್ದು ಹೆಸರಿನ ಮೇಲೆ ಕಾರ್ಯಕ್ರಮವಾಗಿರದೇ ಉದ್ದೇಶ ಸಾಫಲ್ಯದ ಕಡೆಗಿನ ಆಡಳಿತ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ಶಿವರಾಮ ಹೆಬ್ಟಾರ್‌ ಹೇಳಿದರು.

Advertisement

ಶುಕ್ರವಾರ ಇಂದಿರಾ ಕ್ಯಾಂಟೀನ್‌ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾರೂ ಹಸಿವೆಯಿಂದ ಸಾಯಬಾರದು ಎನ್ನುವುದು ನಮ್ಮ ಗುರಿ. ಇದಕ್ಕಾಗಿ ಹಿಂದಿನ ಸರ್ಕಾರ ಈ ಯೋಜನೆಯನ್ನು ಜಾರಿ ಮಾಡಿದ್ದರೂ ಇದಕ್ಕೆ ಇನ್ನಷ್ಟು ಶಕ್ತಿ ತುಂಬಿ ಎಲ್ಲ ಬಡವರಿಗೆ, ಕಾರ್ಮಿಕರಿಗೆ ಕಡಿಮೆ ದರದಲ್ಲಿ ಆಹಾರ ಸಿಗುವಂತೆ ಮಾಡಿದ್ದೇವೆ ಎಂದರು. ತಾ.ಪಂ ಅಧ್ಯಕ್ಷೆ ಸುಜಾತಾ ಗಾಂವಕರ್‌ ಮಾತನಾಡಿ ಶುಭ ಕೋರಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ರಾಜಕೀಯ ಆಟ ಬಡವರಿಗೆ ಶಾಪ ಆಗಬಾರದು ಎಂದರು.

ಪುರಸಭೆ ಮುಖ್ಯಾಧಿಕಾರಿ ಬಿ. ಪ್ರಹ್ಲಾದ್‌ ಸ್ವಾಗತಿಸಿ, ನಿರ್ವಹಿಸಿದರು. ಅಭಿಯಂತ ಭಾಸ್ಕರ ಗೌಡ ವಂದಿಸಿದರು. ಜಿ.ಪಂ ಸದಸ್ಯ ಜಗದೀಶ ನಾಯಕ ಮೊಗಟಾ, ಸಹಾಯಕ ಆಯುಕ್ತ ಎಂ. ಅಜಿತ, ತಹಶೀಲ್ದಾರ್‌ ಉದಯ ಕುಂಬಾರ, ತಾಪಂ ಇಒ ಪರುಶರಾಮ ಸಾವಂತ, ಪುರಸಭಾ ಸದಸ್ಯ ವಿಶ್ವನಾಥ ನಾಯ್ಕ, ನಗರಾಭಿವೃದ್ಧಿ ಕೋಶದ ಅಭಿಯಂತ ಕಮ್ಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next