Advertisement

ಗೆಲ್ಲುವ ಕುದುರೆಗೆ ಬಿಜೆಪಿ ಬಾಜಿ: ಶೋಭಾ

07:45 AM Apr 16, 2018 | Team Udayavani |

ಉಡುಪಿ: ಈ ಬಾರಿ ಗೆಲ್ಲುವ ಕುದುರೆಗೆ ಬಾಜಿ ಕಟ್ಟಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಯಾರು ಗೆಲುವು ತಂದು ಕೊಡಬಲ್ಲರೋ ಅವರಿಗೆ ಬಿಜೆಪಿ ಪಕ್ಷದ ಟಿಕೆಟ್‌ ನೀಡಲಾಗುತ್ತಿದೆ. ಈ ವಿಚಾರವನ್ನು 6 ತಿಂಗಳ ಹಿಂದೆಯೇ ಪಕ್ಷದ ಮುಖಂಡರು ಸ್ಪಷ್ಟವಾಗಿ ಹೇಳಿದ್ದರು ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

Advertisement

ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿರುವುದನ್ನು ವಿರೋಧಿಸಿ ಬಿಜೆಪಿಯ ಕೆಲವು ಪದಾಧಿಕಾರಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಮಾಧ್ಯಮದವರು ಶೋಭಾ ಅವರನ್ನು ಪ್ರಶ್ನಿಸಿದಾಗ “ಕೇಂದ್ರದ ನಾಯಕರು ನಡೆಸಿರುವ ಸಮೀಕ್ಷೆ ಯಂತೆಯೇ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ. ನಮ್ಮ ಅಭಿಪ್ರಾಯವನ್ನು ಮಾತ್ರ ಕೇಳಿದ್ದಾರೆ’ ಎಂದರು. 

ಅಭ್ಯರ್ಥಿ ಘೋಷಣೆ ಸಂದರ್ಭ ಅಸಮಾಧಾನ ಎಲ್ಲ ಪಕ್ಷಗಳಲ್ಲಿಯೂ ಇರುತ್ತದೆ. ಅದು ಮುಂದಕ್ಕೆ ಸರಿಹೋಗುವ ನಿರೀಕ್ಷೆ ಇದೆ. ಪಕ್ಷದ ಟಿಕೆಟನ್ನು ಓರ್ವರಿಗೆ ಮಾತ್ರ ನೀಡಬಹುದು. ಅವಕಾಶ ವಂಚಿತರಾದವರಿಗೆ ಮುಂದೆ ಸರಕಾರ ರಚನೆ ಯಾದಾಗ ಬೇರೆ ಅವಕಾಶವನ್ನು ಪಕ್ಷ ನೀಡಲಿದೆ. ಅಸಮಾಧಾನಗೊಂಡಿರು ವವರ ಜತೆಗೆ ಮಾತುಕತೆ ನಡೆಸಲಾಗುವುದು. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸುವುದು ಪಕ್ಷದ ಮೊದಲ ಗುರಿ. ಹಾಗಾಗಿ ಕೆಲವು ಸಣ್ಣಪುಟ್ಟ ಬೇಸರವನ್ನು ಮರೆತು ತ್ಯಾಗ ಮಾಡುವುದು  ಅನಿವಾರ್ಯ.  ಈಗಾಗಲೇ 72 ಅಭ್ಯರ್ಥಿಗಳ ಘೋಷಣೆಯಾಗಿ ಸದ್ಯದಲ್ಲೇ ಎಲ್ಲ ಅಭ್ಯರ್ಥಿಗಳ ಘೋಷಣೆ ಆಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next