Advertisement

BJP ರಾಮಮಂದಿರ ಕಾನೂನು ತಂದರೆ 2019ರ ಚುನಾವಣೆ ಗೆಲ್ಲುತ್ತದೆ: VHP

06:04 AM Jan 28, 2019 | udayavani editorial |

ಇಂದೋರ್‌ : ಒಂದೊಮ್ಮೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾನೂನನ್ನು ತಂದರೆ 2019ರ ಲೋಕಸಭಾ ಚುನಾವಣೆಯನ್ನು ಅದು ನಿಶ್ಚಿತವಾಗಿಯೂ ಗೆಲ್ಲುತ್ತದೆ ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಮುಖ್ಯಸ್ಥ ವಿ ಎಸ್‌ ಕೋಕಜೆ ಹೇಳಿದ್ದಾರೆ.

Advertisement

“ಆದರೆ ಕೇಂದ್ರ ಸರಕಾರಕ್ಕೆ ಒಂದು ಭಯ ಇದೆ. ತಾನು ಒಂದು ವೇಳೆ ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ತಂದರೆ ಅದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗುವುದು ಎಂಬ ಹಿಂಜರಿಕೆ ಸರಕಾರಕ್ಕೆ ಇದೆ; ಆದರೂ ಸರಕಾರ ನಿರ್ಭಿಡೆಯಿಂದ ಕಾನೂನು ತಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹಾದಿ ಸುಗಮಗೊಳಿಸಿದರೆ ಅದು 2019ರ ಲೋಕಸಭಾ ಚುನಾವಣೆಯನ್ನು ಗೆದ್ದೇ ಗೆಲ್ಲುತ್ತದೆ’ ಎಂದು ಕೋಕಜೆ ಹೇಳಿದರು.

ಈ ನಡುವೆ ಸುಪ್ರೀಂ ಕೋರ್ಟ್‌ ಅಯೋಧ್ಯೆಯ ವಿವಾದಿತ ಭೂಮಿಯ ಒಡೆತನ ಯಾರಿಗೆ ಸೇರಿದ್ದೆಂಬುದನ್ನು ತೀರ್ಮಾನಿಸುವ ವಿಚಾರಣಾ ದಿನಾಂಕವನ್ನು, ಜಸ್ಟಿಸ್‌ ಎಸ್‌ ಎ ಬೋಬಡೆ ಅವರ ಅಲಭ್ಯತೆಯ ಕಾರಣಕ್ಕೆ ಮುಂದಕ್ಕೆ ಹಾಕಿದೆ. ಈ ಮೊದಲು ಸುಪ್ರೀಂ ಕೋರ್ಟ್‌ ವಿಚಾರಣಾ ದಿನವನ್ನು ಜನವರಿ 29ಕ್ಕೆ ನಿಗದಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next