Advertisement

ರಾಜ್ಯಸಭೆ; ಬಿಜೆಪಿ 3 ಸ್ಥಾನಗಳಲ್ಲಿ ಗೆಲ್ಲುತ್ತೆ , ಪಟೇಲ್ ಸೋಲು ಖಚಿತ!

01:46 PM Aug 07, 2017 | Team Udayavani |

ಬೆಂಗಳೂರು/ಅಹ್ಮದಾಬಾದ್: ಭಾರೀ ರಾಜಕೀಯ ಹೈಡ್ರಾಮಾಗಳಿಗೆ ಕಾರಣವಾಗಿದ್ದ ಗುಜರಾತ್ ನ ಕಾಂಗ್ರೆಸ್ ಶಾಸಕರು ಸೋಮವಾರ ಬೆಳಗಿನ ಜಾವ ಬೆಂಗಳೂರಿನಿಂದ ಗುಜರಾತ್ ನ ಅಹ್ಮದಾಬಾದ್ ಗೆ ಮರಳಿದ್ದಾರೆ. ಅಹ್ಮದಾಬಾದ್ ನ ರೆಸಾರ್ಟ್ ಗೆ ಆಗಮಿಸಿದ ಶಾಸಕರನ್ನು ಕಾರ್ಯಕರ್ತರು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.

Advertisement

ಏತನ್ಮಧ್ಯೆ ಕಾಂಗ್ರೆಸ್ ಪಕ್ಷದ 44 ಶಾಸಕರ ರೆಸಾರ್ಟ್ ರಾಜಕೀಯದ ಕುರಿತು ಪ್ರತಿಕ್ರಿಯೆ ನೀಡಿರುವ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ನ ಅಹ್ಮದ್ ಪಟೇಲ್ ಸೋಲು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ.

ಗುಜರಾತಿನ ಜನರು ಪ್ರವಾಹದಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಆದರೆ ಶಾಸಕರು ರೆಸಾರ್ಟ್ ನಲ್ಲಿ ಮಜಾ ಮಾಡುತ್ತಿರುವುದಾಗಿ ಕಿಡಿಕಾರಿರುವ ಮುಖ್ಯಮಂತ್ರಿ ರೂಪಾನಿ, ಕಾಂಗ್ರೆಸ್ ಶಾಸಕರು ನಂಬಿಕೆಗೆ ಅರ್ಹರಾದವರಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next