Advertisement

ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ಟ್ವೀಟ್‌

10:49 PM Jan 26, 2020 | Lakshmi GovindaRaj |

ಬೆಂಗಳೂರು: ತಮ್ಮ ವಿರುದ್ಧ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ನೀಡಿದ್ದ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಬಿಜೆಪಿಯನ್ನು ಟ್ವೀಟ್‌ ಮೂಲಕ ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕರ್ನಾಟಕ ಕುಮಾರಸ್ವಾಮಿ ಅವರಿಗೆ ಟ್ವೀಟ್‌ನಲ್ಲೇ ಉತ್ತರ ನೀಡಿದೆ.

Advertisement

“ಮುಖ್ಯಮಂತ್ರಿಯಾಗಿದ್ದಾಗ ಕಾರ್ಯಕರ್ತರಿಗೆ ಅಧಿಕಾರ ನೀಡದೇ, ಬಾಯಿಮಾತಿನಲ್ಲಿಯೇ ಮಿಣಿ ಮಿಣಿ ಪ್ರಪಂಚ ತೋರಿಸಿದ ಯುಗಪುರಷರಿಗೆ ಈಗ ಕಾರ್ಯಕರ್ತರ ನೆನಪಾಯಿತೋ?. ಚುನಾವಣೆಯಲ್ಲಿ ಕಾಂಗ್ರೆಸ್‌ ವಿರೋಧಿ ಒಕ್ಕಲಿಗರ ಓಟು ಪಡೆದು, ಅದೇ ಪಕ್ಷದೊಂದಿಗೆ ಹಿಂಬಾಗಿಲಿನಿಂದ ಅಧಿಕಾರ ಹಿಡಿದ ಎಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ಜೀನ್‌ ಯಾವುದು ಎಂದು ಸ್ಪಷ್ಟಪಡಿಸಿ’ ಎಂದು ಕರ್ನಾಟಕ ಬಿಜೆಪಿ ಟ್ವೀಟ್‌ ಮೂಲಕ ಕುಮಾರಸ್ವಾಮಿಗೆ ಖಡಕ್‌ ಉತ್ತರ ನೀಡಿದೆ.

ಒಕ್ಕಲಿಗ ಎಂಬ ಹೆಸರನ್ನು ಕುಮಾರಸ್ವಾಮಿ ಬಳಸಬಾರದು, ಸಮಾಜ ಒಡೆಯುವ ಕೆಲಸವನ್ನು ಎಚ್‌ಡಿಕೆ ಮಾಡುತ್ತಿದ್ದಾರೆ ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ. ಒಂದು ಸಮುದಾಯದ ನಾಯಕನನ್ನು ಟೀಕಿಸಲು ಅದೇ ಸಮುದಾಯ ವ್ಯಕ್ತಿಯನ್ನು ಬಳಸಿಕೊಳ್ಳುವುದು ಬಿಜೆಪಿ ಸೋಂಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮಾಡಿದ್ದ ಟ್ವೀಟ್‌ಗೆ ಬಿಜೆಪಿ ಕರ್ನಾಟಕ “ನಿಮ್ಮ ಜೀನ್‌ ಯಾವುದು ಎಂದು ಸ್ಪಷ್ಟಪಡಿಸಿ’ ಎಂಬ ಖಡಕ್‌ ಮರುಟ್ವೀಟ್‌ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next