Advertisement

ಬಿಜೆಪಿ ನೀಡಿದ ದೊಡ್ಡ ಆಫ‌ರನ್ನು ಎಚ್‌ಡಿಕೆ ತಿರಸ್ಕರಿಸಿದ್ದರು : ಎಚ್‌ಡಿಡಿ

09:23 AM Mar 29, 2019 | Team Udayavani |

ಬೆಂಗಳೂರು: ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಗೂ ಮುನ್ನನೀಡಿದ್ದ ದೊಡ್ಡ ಮೊತ್ತದ ಆಮಿಷ ವನ್ನು ಎಚ್‌.ಡಿ.ಕುಮಾರಸ್ವಾಮಿ ಅವರು ತಿರಸ್ಕರಿಸಿದ್ದರು ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಹೇಳಿಕೆ ನೀಡಿದ್ದಾರೆ.

Advertisement

ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಎಚ್‌ಡಿಡಿ, ಚುನವಾಣೆಯ ವೆಚ್ಚಕ್ಕಾಗಿ ಭಾರೀ ಪ್ರಮಾಣದ ಹಣವನ್ನು ಬಿಜೆಪಿ ನೀಡಲು ಮುಂದಾಗಿತ್ತು. ಮುಂಬಯಿಯಲ್ಲಿ ಹಣವಿರಿಸಿ ಕುಮಾರಸ್ವಾಮಿ ಅವರನ್ನು ಮಾತುಕತೆಗೆ ಕರೆದಿತ್ತು. ಆದರೆ ಕುಮಾರಸ್ವಾಮಿ ಅವರು ತಿರಸ್ಕರಿಸಿದ್ದರು ಎಂದು ಹೇಳಿದ್ದಾರೆ.

ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಆರೋಪ ಪ್ರತ್ಯಾರೋಪಗಳೂ ತೀವ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next