Advertisement

BJP ಟಿಕೆಟ್‌ ವಂಚನೆ ಪ್ರಕರಣ: ಆರೋಪಿ ಸೆರೆ

10:46 PM Oct 28, 2023 | Team Udayavani |

ಕೊಟ್ಟೂರು: ಕಳೆದ ವಿಧಾನಸಭೆ ಚುನಾವಣೆ ವೇಳೆ ಪಟ್ಟಣದ ನಿವೃತ್ತ ಎಂಜಿನಿಯರ್‌ ಶಿವಮೂರ್ತಿ ಅವರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಆರೋಪದಲ್ಲಿ ರೇವಣಸಿದ್ದಪ್ಪ ಎಂಬವರನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

Advertisement

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಟಿಕೆಟ್‌ ಕೊಡಿಸುವುದಾಗಿ 1.95 ಕೋ. ರೂ.ಗೂ ಹೆಚ್ಚು ಮೊತ್ತ ಪಡೆದು ವಂಚಿಸಿದ್ದ ಬಗ್ಗೆ ರೇವಣಸಿದ್ದಪ್ಪ ವಿರುದ್ಧ ಪ್ರಕರಣ ದಾಖಲಾಗಿತ್ತು.

ತಾಲೂಕಿನ ಬೆನಕನಹಳ್ಳಿ ನಿವಾಸಿಯಾಗಿದ್ದ ಆರೋಪಿಯು ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದರು. ಅವರನ್ನು ಬಂಧಿಸಲು ವಿಜಯನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ನೇತೃತ್ವದಲ್ಲಿ ಕೂಡ್ಲಿಗಿ ಪೊಲೀಸ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ಸುರೇಶ ತಳವಾರ, ಸಬ್‌ಇನ್‌ಸ್ಪೆಕ್ಟರ್‌ಗಳಾದ ಪ್ರಕಾಶ (ಗುಡೇಕೊಟೆ), ಧನಂಜಯ (ಕೂಡ್ಲಿಗಿ), ಕೊಟ್ಟೂರು ಠಾಣೆ ಪೇದೆಗಳಾದ ಬಸವರಾಜ್‌, ವಿರುಪಾಕ್ಷಿ ಗಡ್ಡಿ, ವೀರೇಶ ಹಾಗೂ ಆರಾಧ್ಯ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ಬೆಂಗಳೂರು ಬಳಿ ಆರೋಪಿ ರೇವಣಸಿದ್ದಪ್ಪ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸ್‌ ತಂಡ, ಅವ ರನ್ನು ವಶಕ್ಕೆ ಪಡೆದು ಶುಕ್ರವಾರ ರಾತ್ರಿ ಕೊಟ್ಟೂರು ಠಾಣೆಗೆ ಕರೆತಂದಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next