Advertisement

ನನ್ನನ್ನು BJP ಮತ್ತು RSS ಕೊಲ್ಲಲು ಯತ್ನಿಸಿದೆ;ತೇಜ್‌ ಪ್ರತಾಪ್‌ 

11:19 AM Aug 23, 2018 | |

ಪಾಟ್ನಾ: ನನ್ನ ಸ್ವಕ್ಷೇತ್ರ ಮಹುವಾ ಪ್ರವಾಸದಲ್ಲಿದ್ದ ವೇಳೆ ಶಸ್ತ್ರಧಾರಿ ವ್ಯಕ್ತಿಯೊಬ್ಬ ನನ್ನನ್ನು ಕೊಲ್ಲಲು ಯತ್ನಿಸಿದ ಎಂದು ಆರ್‌ಜೆಡಿ ಯುವ ನಾಯಕ,ಮಾಜಿ ಸಚಿವ ತೇಜ್‌ಪ್ರತಾಪ್‌ ಯಾದವ್‌ ಆರೋಪಿಸಿದ್ದಾರೆ. 

Advertisement

ಶಸ್ತ್ರ ಹೊಂದಿದ್ದ ವ್ಯಕ್ತಿಯೊಬ್ಬ ನನ್ನ ಕೈಕುಲುಕಿದ. ಕೆಲ ಹೊತ್ತು ಕೈಯನ್ನು ಬಿಡದೆ ಹತ್ಯೆಗೆ ಯತ್ನಿಸಿದ. ಭದ್ರತಾ ಸಿಬಂದಿಗಳು ನನ್ನ ಹತ್ಯೆಯನ್ನು ತಡೆದರು. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನನ್ನ ಹತ್ಯೆಗೆ ಸಂಚು ರೂಪಿಸಿದೆ ಎಂದು ಆರೋಪಿಸಿದ್ದಾರೆ. 

ಬಿಹಾರದಲ್ಲಿ  ಮಂತ್ರಿಗಳು, ಎಂಎಲ್‌ಎಗಳು ಸುರಕ್ಷಿತವಿಲ್ಲ.ಇನ್ನು ಸಾಮಾನ್ಯ ಜನರು ಹೇಗೆ ಸುರಕ್ಷಿತವಾಗಿರುವುದು ಎಂದು ತೇಜ್‌ ಪ್ರತಾಪ್‌ ಟ್ವೀಟ್‌ ಮಾಡಿದ್ದಾರೆ. 

ದಾಳಿ ಮಾಡಲೆತ್ನಿಸಿದ ಆರೋಪಿಯನ್ನು ಇನ್ನಷ್ಟೇ ಬಂಧಿಸಬೇಕಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next