Advertisement

ನನ್ನ ಸಿನಿಮಾ ಮಾಡುವ ಅವಶ್ಯಕತೆ ಇಲ್ಲ,ಚುನಾವಣೆಯತ್ತ ಗಮನ ಕೊಡಿ 

02:27 PM Jun 02, 2017 | Team Udayavani |

ಕಲಬುರಗಿ : ನನ್ನ ಜೀವನಾಧಾರಿತ ಸಿನಿಮಾ ಮಾಡುವ ಅವಶ್ಯಕತೆ ಇಲ್ಲ. ಯಾರಿಗೂ ನಾನು ಈ ಬಗ್ಗೆ ಒಪ್ಪಿಗೆ ನೀಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ,ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. 

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ’ನನ್ನ ಸಿನಿಮಾ ಮಾಡಲು ಅನೇಕರು ಒತ್ತಾಯ ಮಾದಿದ್ದಾರೆ. ಆದರೆ ನಾನು ಯಾರಿಗೂ ಒಪ್ಪಿಗೆ ನೀಡಿಲ್ಲ. ಇದು ಚುನಾವಣೆಯ ಸಮಯ ಎಲ್ಲರೂ ಚುನಾವಣೆಯತ್ತ ಗಮನ ಹರಿಸೋಣ’ ಎಂದರು. 

ಜೆಡಿಎಸ್‌ ನಾಯಕ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಜೀವನಾಧಾರಿತ ಸಿನಿಮಾ ‘ಭೂಮಿಪುತ್ರ’  ಚಿತ್ರ ಲಾಂಚ್‌ ಆದ ಬೆನ್ನಲ್ಲೇ ಬಿಎಸ್‌ವೈ ಕುರಿತಾಗಿನ ಚಿತ್ರದ ಕುರಿತಾಗಿ ಮಾತುಕತೆಗಳು ನಡೆದಿದ್ದವು.ರುದ್ರೇಶ್, ಜಿ.ಮರಿಸ್ವಾಮಿ ನಿರ್ಮಾಣದಲ್ಲಿ  ಎಂ.ಎಸ್. ರಮೇಶ್ ನಿರ್ದೇಶನದಲ್ಲಿ  ರಿಯಲ್‌ ಸ್ಟಾರ್‌ ಉಪೇಂದ್ರ ಅವರು ಯಡಿಯೂರಪ್ಪ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುವ ಬಗ್ಗೆ  ಚರ್ಚೆ ನಡೆದಿತ್ತು. ಇದೀಗ ಯಡಿಯೂರಪ್ಪ ಅವರು ಅನುಮತಿ ನಿರಾಕರಿಸಿರುವ ಹಿನ್ನಲೆಯಲ್ಲಿ ಚಿತ್ರ ಮುಂದುವರಿಯುವ ಸಾಧ್ಯತೆಗಳು ವಿರಳ. 

‘ಭೂಮಿಪುತ್ರ’ ಚಿತ್ರದಲ್ಲಿ  ಎಚ್‌.ಡಿ. ಕುಮಾರಸ್ವಾಮಿ ಅವರ ಆಡಳಿತಾವಧಿಯ 20 ತಿಂಗಳ ಚಿತ್ರಣವಿರಲಿದ್ದು, ನಟ ಅರ್ಜುನ್‌ ಸರ್ಜಾ,ಕುಮಾರಸ್ವಾಮಿ ಅವರ ಪಾತ್ರ ನಿರ್ವಹಿಸುತ್ತಿದ್ದಾರೆ. ಎಸ್‌.ನಾರಾಯಣ್‌ ನಿರ್ದೇಶನ ಚಿತ್ರಕ್ಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next