Advertisement

ಬಿಜೆಪಿಯವರು ಜಾತಿ ರಾಜಕಾರಣ ಮಾಡುತ್ತಾರೆ, ನಮಗೆ ಕಾಂಗ್ರೆಸ್ ಒಂದೇ ಜಾತಿ: ಡಿ ಕೆ ಶಿವಕುಮಾರ್

04:05 PM Oct 26, 2020 | keerthan |

ಬೆಂಗಳೂರು: ಬಿಜೆಪಿಯವರು ಜಾತಿ ರಾಜಕೀಯ ಮಾಡುತ್ತಾರೆ. ನಮಗೆ ಒಂದೇ ಜಾತಿ ಅದು ಕಾಂಗ್ರೆಸ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗರು ವೋಟು ಹಾಕಿ ಎಂದು ನಾನು ಬಹಿರಂಗವಾಗಿ ಎಲ್ಲಿಯೂ ಕೂಡ ಹೇಳಿಕೆ ಕೊಟ್ಟಿಲ್ಲ. ಆದರೆ ವೀರಶೈವರು ಬಿಜೆಪಿಗೆ ಮತ ಹಾಕಿ ಎಂದು ಯಡಿಯೂರಪ್ಪ ಅವರೆ ಗೋಕಾಕನಲ್ಲಿ ಹೇಳಿದ್ದರು. ಈಗ ಸಿಟಿ ರವಿ, ಅಶ್ವಥ್ ನಾರಾಯಣ, ಅಶೋಕ್ ಕೂಡ ಹೇಳುತ್ತಿದ್ದಾರೆ ಎಂದರು.

ಫೋಟೋ ಹಾಕಿ ಸೆಟ್ಟಪ್ ಬಾಕ್ಸ್ ಕೊಡುತ್ತಿರುದನ್ನು ಅಭ್ಯರ್ಥಿಯೇ ಒಪ್ಪಿಕೊಂಡಿದ್ದಾರೆ. ಇದು ನನ್ನ ಬ್ಯುಸಿನೆಸ್ ನಾನು ಮಾಡುತ್ತಿದ್ದೇನೆ ಎಂದು ಅಭ್ಯರ್ಥಿ ಹೇಳಿದ್ದಾರೆ. ಎಲೆಕ್ಷನ್ ಕಮಿಷನ್ ಕೂಡಲೇ ಕ್ರಮ ಕೈಗೊಳ್ಳಲಿ. ಎಲೆಕ್ಷನ್ ಕಮಿಷನ್ ಬದುಕಿದ್ದರೆ ಕ್ರಮ ಕೈಗೊಳ್ಳಲಿ ಎಂದು ಮುನಿರತ್ನ ವಿರುದ್ಧ ಕ್ರಮಕ್ಕೆ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.

ಇದನ್ನೂ ಓದಿ:ಪ್ರಜಾಪ್ರಭುತ್ವದಲ್ಲಿ ವಿಶ್ವಾಸವೇ ಇಲ್ಲದ ಕಾಂಗ್ರೆಸ್ ಅವಸಾನದತ್ತ: ಪ್ರಹ್ಲಾದ ಜೋಶಿ

ನವೆಂಬರ್ ಮೂರರಂದು ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ನ.10ರಂದು ಮತ ಎಣಿಕೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next