Advertisement

ದೇಶದೊಳಗಿನ ದುಷ್ಟ ಶಕ್ತಿ ದಮನಕ್ಕೆ ವೇದ ಯಜ್ಞ

11:40 AM Jan 23, 2018 | Team Udayavani |

ನವದೆಹಲಿ: ದೇಶದ ಒಳಗಿರುವ ದುಷ್ಟ ಶಕ್ತಿಗಳ ಕುತಂತ್ರಗಳನ್ನು ಮಟ್ಟಹಾಕಲು ದೆಹಲಿಯ ಕೆಂಪು ಕೋಟೆಯ ವಿಸ್ತಾರವಾದ ಹುಲ್ಲು ಹಾಸಿನ
ಮೇಲೆ ಮಾ.18ರಿಂದ 25ರ ವರೆಗೆ ವೇದ ಯಜ್ಞ ಮಾಡಲಾಗುವುದು ಎಂದು ಬಿಜೆಪಿ ಸಂಸದ ಮಹೇಶ್‌ ಗಿರಿ ಸೋಮವಾರ ತಿಳಿಸಿದ್ದಾರೆ. 

Advertisement

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಹೇಳಿದ್ದಾರೆ. 1,100 ಪುರೋಹಿತರು ಭಾಗವಹಿಸಲಿದ್ದಾರೆ. ದೆಹಲಿಯ ಹಲವಾರು ಉದ್ಯಮಿಗಳು ಇದಕ್ಕಾಗಿ ದೇಣಿಗೆ ನೀಡಲು ಮುಂದಾಗಿದ್ದಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next